ಜಮೀರ್ ಅಹ್ಮದ್ ಓರ್ವ ಪ್ರಚಾರ ಪ್ರಿಯ, ಬಳ್ಳಾರಿಗೆ ಬರಲಿ: ಸೋಮಶೇಖರ್ ರೆಡ್ಡಿ

ಬೆಂಗಳೂರು: ಸೋಮವಾರ ಮಾಜಿ ಸಚಿವ ಜಮೀರ್ ಅಹ್ಮದ್ ನಮ್ಮ ಮನೆಗೆ ಬರುವುದಾದರೆ ಬರಲಿ, ನಾನು ಬೇಡ ಎನ್ನಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ಜಮೀರ್ ಅಹ್ಮದ್ ಒಬ್ಬ ಪ್ರಚಾರ ಪ್ರಿಯ ನಾಯಕ. ಹೀಗಾಗಿ ನಾಳೆ ನಮ್ಮ ಮನೆಗೆ ಬರುತ್ತೆನೆ ಎಂದಿದ್ದಾರೆ. ಬೇಕಿದ್ರೆ ಜಮೀರ್ ಅಹ್ಮದ್ ಬಳ್ಳಾರಿಗೆ ಬರಲಿ ಅದಕ್ಕೆ ನಾನು ಬೇಡ ಅನ್ನಲ್ಲ. ನಾನು ದೇಶದ್ರೋಹಿಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಸಿಎಎ ಪರವಾದ ಬಹಿರಂಗ ಸಭೆಯಲ್ಲಿ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾಕಾರಿ ಭಾಷಣ ಖಂಡಿಸಿ ಜಮೀರ್ ಅಹ್ಮದ್ ಸವಾಲ್ ಹಾಕಿ ಬಳ್ಳಾರಿಗೆ ಬಂದು ಪ್ರತಿಭಟನೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಸೋಮವಾರ ಬಳ್ಳಾರಿಗೆ ತೆರಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *