ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಡೋದರಲ್ಲಿ ತಪ್ಪೇನಿಲ್ಲ: ಜಮೀರ್ ಅಹ್ಮದ್ ಸಮರ್ಥನೆ

ಬೆಂಗಳೂರು: ನಮ್ಮ ಮುಸ್ಲಿಂ ಧರ್ಮ ಗುರುಗಳು ಹಜ್ ಭವನಕ್ಕೆ ಹಜರತ್ ಟಿಪ್ಪು ಸುಲ್ತಾನ್ ಹೆಸರು ಇಡೋದಕ್ಕೆ ಮನವಿಗಳನ್ನು ಸಲ್ಲಿಸಿದ್ದಾರೆ. ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡೋದರಲ್ಲಿ ತಪ್ಪೇನಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗು ವಕ್ಫ್ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಜ್ ಭವನವನ್ನು ಉದ್ಘಾಟನೆ ಮಾಡಿದ್ದರು. ಆದ್ರೆ ಮುಸ್ಲಿಂ ಧರ್ಮಗುರುಗಳು ಭವನದ ಹೆಸರು ಬದಲಿಸಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಹಜ್ ಭವನ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಅದು ಸರ್ಕಾರಿ ಕಟ್ಟಡ ಅಲ್ಲ. ಅದೊಂದು ಧಾರ್ಮಿಕ ಕಟ್ಟಡವಾಗಿದ್ದು, ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ರು.

ಹಲವು ಕಾರಣಗಳಿಂದ ಟಿಪ್ಪು ಜಯಂತಿ ಆಚರಣೆ ವಿವಾದವಾಗಿತ್ತು. ಆದರೆ ಹಜ್ ಭವನಕ್ಕೆ ಟಿಪ್ಪು ಸುಲ್ತಾನರ ಹೆಸರಿಟ್ಟರೆ ಯಾರೂ ವಿರೋಧ ಮಾಡಲ್ಲ. ಕಾರಣ ಅದೊಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಪ್ರತ್ಯೇಕ ಕಟ್ಟಡವಾಗಿದೆ. ಒಂದು ವೇಳೆ ಸಾರ್ವಜನಿಕ ಸ್ಥಳಗಳಿಗೆ ಹೆಸರು ಇಡಲು ಮುಂದಾದ್ರೆ ವಿವಾದ ಆಗುತ್ತೆ ಎಂದು ಹೇಳಿದ್ರು.

https://www.youtube.com/watch?v=HbpNeA9QQak

Comments

Leave a Reply

Your email address will not be published. Required fields are marked *