ಆಕಳ ಕರುವನ್ನ ಕದ್ದು ಕೊಂದ ಯುವಕರಿಗೆ ಸಾರ್ವಜನಿಕರಿಂದ ಧರ್ಮದೇಟು

ರಾಯಚೂರು: ನಗರದ ನಂದೀಶ್ವರ ದೇವಾಲಯದ ಬಳಿ ಆಕಳ ಕರುವನ್ನು ಕೊಂದು ಹೊತ್ತೊಯ್ಯುತ್ತಿದ್ದ ಯುವಕರನ್ನ ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ನಗರದ ತಿಮ್ಮಾಪುರಪೇಟೆಯ ಸಾಧಿಕ್ ಹಾಗೂ ಖಲಂದರ್ ಆಕಳ ಕರುವನ್ನ ಕದ್ದು ಕೊಂದಿದ್ದಾರೆ. ಸಂಗಮೇಶಸ್ವಾಮಿ ಎಂಬವರ ಆಕಳು ಇತ್ತೀಚಗಷ್ಟೇ ಗಂಡು ಕರುವಿಗೆ ಜನ್ಮ ನೀಡಿತ್ತು. ದೇವಸ್ಥಾನದ ಬಳಿ ಹುಲ್ಲು ಮೇಯುತ್ತಿದ್ದ ಕರುವನ್ನ ಕದ್ದು ಕೊಂದಿದ್ದಾರೆ.

ನಂತರ ಚೀಲದಲ್ಲಿ ಎತ್ತಿಕೊಂಡು ಹೋಗುವಾಗ ಸಾರ್ವಜನಿಕರಿಗೆ ಅನುಮಾನ ಬಂದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವಕರು ಈ ಕರುವನ್ನು ಮಾಂಸದಂಗಡಿಗೆ ಕರುವನ್ನ ಮಾರಾಟ ಮಾಡಲು ಒಯ್ಯುತ್ತಿದ್ದರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *