ದಲಿತರ ಮನೆಗೆ ನುಗ್ಗಿ ಗೂಂಡಾಗಿರಿ – ಸಾಯಿಸ್ತೀವಿ ಅಂತ ತಾಯಿ, ಮಗಳಿಗೆ ಧಮ್ಕಿ!

ಮಂಗಳೂರು: ಚಿಕ್ಕಮಗಳೂರಲ್ಲಿ ಹಿಂದೂ ನೈತಿಕ ಪೊಲೀಸ್‍ಗಿರಿ ಧನ್ಯಶ್ರೀ ಅನ್ನೋ ಯುವತಿಯ ಸಾವಿಗೆ ಕಾರಣವಾಗಿತ್ತು. ಅದೇ ರೀತಿಯಲ್ಲಿ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೆಲ ಪುಂಡರು ಮನೆಯೊಂದಕ್ಕೆ ನುಗ್ಗಿ ದಲಿತ ಸಮುದಾಯಕ್ಕೆ ಸೇರಿದ ಮನೆಯೊಂದಕ್ಕೆ ದಾಂಧಲೆ ಮಾಡಿದ್ದಾರೆ.

ತಾಯಿ ಮತ್ತು ಅಪ್ರಾಪ್ತ ಮಗಳಿಗೆ ಜೀವ ಬೆದರಿಕೆ ಹಾಕಿದ್ದು ತಡೆಯಲು ಬಂದವ್ರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಸ್ಲಿಂ ಯುವಕನ ಜೊತೆಗೆ ಮಾತಾಡಿದ್ರೆ ಸಾಯಿಸ್ತೇವೆ. ಒಂದು ವೇಳೆ ನಿಮಗೆ ಬದುಕ್ಬೇಕು ಅಂತಿದ್ರೆ ಊರು ಬಿಟ್ಟು ಹೋಗಿ ಅಂತ ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ಅರೆಸ್ಟ್

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೂಂಡಾಗಿರಿ ಎಸಗಿದ 33 ವರ್ಷದ ಉಮೇಶ್, 48 ವರ್ಷ ರಮೇಶ್‍ನನ್ನು ಬಂಧಿಸಿದ್ದಾರೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಮೇಶ್ ಸಹೋದರ ರಾಜೇಶ್ ಸೇರಿದಂತೆ ಉಳಿದಿಬ್ಬರು ಆರೋಪಿಗಳು ಓಡಿಹೋಗಿದ್ದಾರೆ. ಇದನ್ನೂ ಓದಿ: ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಧಮ್ಕಿ ಹಾಕಿದ್ದು ಬೆಳ್ತಂಗಡಿ ಬಜರಂಗದಳದವರು ಅಂತ ತಾಯಿ ಕಣ್ಣೀರು

ಇದನ್ನೂ ಓದಿ: ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

Comments

Leave a Reply

Your email address will not be published. Required fields are marked *