ನಿಖಿಲ್ ಪರ ವಾಟ್ಸಪ್ ಸ್ಟೇಟಸ್ – ಯುವಕನಿಗೆ ಜೀವ ಬೆದರಿಕೆ

ಮಂಡ್ಯ: ವಾಟ್ಸಪ್ ಸ್ಟೇಟಸ್‍ನಲ್ಲಿ ನಿಖಿಲ್ ಪರ ಬರೆದುಕೊಂಡಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ರಕ್ಷಣೆ ನೀಡುವಂತೆ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.

ವಾಟ್ಸಪ್ ಸ್ಟೇಟಸ್‍ಗೆ ನಿಖಿಲ್ ಫೋಟೋ ಹಾಕಿ `ನಿಮ್ಮ ಜೊತೆ ನಾವು’ ಎಂದು ಚೇತನ್ ಎಂಬ ಯುವಕ ಬರೆದುಕೊಂಡಿದ್ದನು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚೇತನ್, ಶಾಸಕ ಸುರೇಶ್‍ಗೌಡ ಪರ ಗುರುತಿಸಿಕೊಂಡಿದ್ದನು. ನಿಖಿಲ್ ಪರ ಹಾಕಿಕೊಂಡಿದ್ದ ಸ್ಟೇಟಸ್ ನೋಡಿ ಚೇತನ್ ವಾಟ್ಸಪ್‍ಗೆ 13 ವಾಯ್ಸ್ ರೆಕಾರ್ಡ್ ಮೆಸೇಜ್ ನ್ನು ಮೂವರು ಯುವಕರು ಕಳುಹಿಸಿದ್ದರು.

ಮಾಜಿ ಶಾಸಕ ಚಲುವರಾಯಸ್ವಾಮಿ ಪರ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಸುರೇಶ್‍ಗೌಡ, ನಿಖಿಲ್ ವಿರುದ್ಧ ಅವಾಚ್ಯ ಶಬ್ಧ ಬಳಸಿ ವಾಯ್ಸ್ ರೆಕಾರ್ಡ್ ಮೆಸೇಜ್ ಮಾಡಿದ್ದಾರೆ. ನಾಗಮಂಗಲ ತಾಲೂಕಿನವರೇ ಆದ ಚಂದನ್, ಮಾರುತಿ ಮತ್ತು ಪವನ್ ಎಂಬವರು ನಿಖಿಲ್ ಅಭಿಮಾನಿ ಚೇತನ್‍ಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಕಿಡಿಗೇಡಿಗಳಿಗೆ ಬೆದರಿದ ಯುವಕ ಚೇತನ್ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಮೂವರು ಯುವಕರಲ್ಲಿ ಓರ್ವನ ಬಂಧಿಸಿದ್ದಾರೆ. ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *