ಮದುವೆ ಆಗುವುದಾಗಿ ನಂಬಿಸಿ ಯುವತಿ ಜೊತೆ ಹಲವು ಬಾರಿ ಸೆಕ್ಸ್

– ಕೀಳುಜಾತಿಯವಳು ಎಂದು ಮದುವೆ ನಿರಾಕರಿಸಿದ
– ನಿನ್ನನ್ನೇ ಮದುವೆ ಆಗುತ್ತೇನೆ ಎಂದವ ಅರೆಸ್ಟ್

ಶಿವಮೊಗ್ಗ: ಮದುವೆ ಆಗುವುದಾಗಿ ನಂಬಿಸಿ ಯುವಕನೊಬ್ಬ ಯುವತಿ ಜೊತೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನಗರದಲ್ಲಿ ನಡೆದಿದೆ.

ಶಿವರಾಜ್ ಪೂಜಾರಿ (25) ಬಂಧಿತ ಆರೋಪಿ. ಉಡುಪಿ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಟುಗೊಳ್ಳಿ ನಿವಾಸಿಯಾಗಿರುವ ಶಿವರಾಜ್ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.

ಆರೋಪಿ ಶಿವರಾಜ್ ಪೂಜಾರಿ ಬಸವನಬ್ಯಾಣ ಸಮೀಪ ಗ್ರಾಮದ ಯುವತಿಯನ್ನು ಮೂರು ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದನು. ನಂತರ ಯುವತಿ ಬಳಿ ಹೋಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದು, ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಆಕೆಯನ್ನು ನಂಬಿಸಿದ್ದಾನೆ.

ಯುವತಿಯನ್ನು ನಂಬಿಸಿದ ಬಳಿಕ ಆರೋಪಿ ಶಿವರಾಜ್ ಹಲವು ಬಾರಿ ಆಕೆಯ ಜೊತೆ ದೈಹಿಕ ಸಂಪರ್ಕ ಸಹ ಬೆಳೆಸಿದ್ದನು. ನಂತರ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಹ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು.

ಇತ್ತೀಚೆಗೆ ಯುವತಿ ಕುಟುಂಬಸ್ಥರು ಮದುವೆ ಪ್ರಸ್ತಾಪ ಮುಂದಿಟ್ಟಾಗ ಶಿವರಾಜ್ ಹಾಗೂ ಆತನ ಕುಟುಂಬದವರು ಯುವತಿ ಕೀಳು ಜಾತಿಯವಳು ಆದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಆರೋಪಿ ಯುವಕನ ಕುಟುಂಬಸ್ಥರು ಜಾತಿ ನಿಂದನೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿ ಯುವಕನ ಕುಟುಂಬಸ್ಥರು ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದರು.

ಸದ್ಯ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯ ತಂದೆ ಆನಂದ್ ಪೂಜಾರಿ, ತಾಯಿ ಗಿರಿಜಾ ಹಾಗೂ ಸಹೋದರಿ ತೇಜಸ್ವಿನಿ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಶಿವರಾಜ್ ಪೂಕಾರಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *