ಹುಡುಗಿಗಾಗಿ ಸ್ನೇಹಿತರಿಂದಲೇ ಕೊಲೆಯಾದ ಯುವಕ

ಬೆಂಗಳೂರು: ದರೋಡೆ, ಸುಲಿಗೆ ಮಾಡಿಕೊಂಡು ಪ್ರೀತಿ ಎಂದು ಒಡಾಡುತ್ತಿದ್ದ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುದರ್ಶನ್ ಕೊಲೆಯಾದ ಯುವಕ. ಹುಡುಗಿಯ ವಿಚಾರಕ್ಕಾಗಿ ಸ್ನೇಹಿತರೆಲ್ಲಾ ಸೇರಿಕೊಂಡು ಸುದರ್ಶನ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದರ್ಶನ್ ಹಾಗೂ ಸ್ನೇಹಿತರು ಜೊತೆಗೆ ದರೋಡೆ, ಸುಲಿಗೆ ಮಾಡಿಕೊಂಡಿದ್ದರು.

ಈ ಗ್ಯಾಂಗ್‍ನಲ್ಲಿದ್ದ ಸದಸ್ಯನ ತಂಗಿಯನ್ನು ಸುದರ್ಶನ್ ಪ್ರೀತಿಸುತ್ತಿದ್ದನು. ಈ ವಿಷಯ ಆಕೆಯ ಸಹೋದರನಿಗೆ ತಿಳಿಯಿತು. ಬಳಿಕ ಈ ವಿಚಾರವಾಗಿ ಸುದರ್ಶನ್ ಹಾಗೂ ಆತನ ಗ್ಯಾಂಗ್‍ನಲ್ಲಿದ್ದ ಹುಡುಗರ ನಡುವೆ ಆಗಾಗ ಜಗಳ ಕೂಡ ಆಗುತ್ತಿತ್ತು.

ಜೈಲಿನಿಂದ ಬಂದಿದ್ದ ಸುದರ್ಶನ್ ಜೊತೆ ಮಾತನಾಡುವುದಕ್ಕೆ ತಂಡ ಆತನನ್ನು ಪೂರ್ಣ ಚಂದ್ರತೇಜಸ್ವಿ ಬಡವಾಣೆಗೆ ಕರೆಸಿಕೊಂಡಿದ್ದರು. ಖಾಲಿ ಸೈಟ್‍ನಲ್ಲಿ ಯುವಕರ ಗುಂಪು ಗಲಾಟೆ ಮಾಡಿ ಸುದರ್ಶನ್ ಕತ್ತು ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಬಗ್ಗೆ ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *