ಬಾತುಕೋಳಿ ಹಿಡಿಯಲು ಹೋಗಿ ಪ್ರಾಣ ಬಿಟ್ಟ ಯುವಕ!

ಬೆಂಗಳೂರು: ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮಂಗಮ್ಮನ ಪಾಳ್ಯದಲ್ಲಿರುವ ಸುಂದರವಾದ ಕೆರೆಯಲ್ಲಿ ನಡೆದಿದೆ.

ಸಲ್ಮಾನ್ ಮೃತ ದುರ್ದೈವಿ. ಬಾತುಕೋಳಿಯನ್ನು ನೋಡಿ ಆಸೆಯಿಂದ ಹಿಡಿಯಲು ಹೋಗಿ ಸಲ್ಮಾನ್ ನೀರಿನಲ್ಲಿ ಮುಳುಗಿದ್ದಾನೆ. ಘಟನೆಯಿಂದ ಯುವಕ ಪ್ರಾಣ ಬಿಟ್ಟರೆ, ಬಾತುಕೋಳಿ ಯುವಕನ ಕೈಯಿಂದ ಬಚಾವ್ ಆಗಿದೆ.

ಘಟನೆ ವಿವರ: ಸಲ್ಮಾನ್ ಕೆರೆಯಲ್ಲಿ ಬಾತುಕೊಳಿಯನ್ನು ನೋಡಿದ್ದಾನೆ. ತಕ್ಷಣವೇ ಅದನ್ನು ಹಿಡಿಯಬೇಕು ಅಂತ ಕೆರೆಗೆ ಇಳಿದಿದ್ದಾನೆ. ಆದರೆ ದುರಾದೃಷ್ಟವಶಾತ್ ಸಲ್ಮಾನ್ ಖಾನ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ನೀರಿನಲ್ಲಿ ಮುಳುಗಿದ್ದಾನೆ. ಈ ಅವಘಡವನ್ನು ಗಮನಿಸಿದ ಸಲ್ಮಾನ್ ನ ಇಬ್ಬರು ಸ್ನೇಹಿತರು ರಕ್ಷಣೆ ಮಾಡಲು ಹೋಗಿದ್ದಾರೆ. ಆದ್ರೆ ಅಷ್ಟರಲ್ಲಿ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಈ ಘಟನೆ ಬಗ್ಗೆ ಸ್ಥಳೀಯರು ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಸಲ್ಮಾನ್ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇನ್ನು ಮೃತದೇಹ ಸಿಕ್ಕಿಲ್ಲ. ಇತ್ತ ಸಲ್ಮಾನ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Comments

Leave a Reply

Your email address will not be published. Required fields are marked *