ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

ಬೀದರ್: ಸುಡು ಬಿಸಿಲಿನಿಂದ ಬಸವಳಿದಿದ್ದ ಗಡಿ ಜಿಲ್ಲೆ ಬೀದರ್‍ನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

ಬಿಸಿಲ ಬೇಗೆಯಿಂದ ಬೀದರ್ ಜನತೆ ತತ್ತರಿಸಿ ಹೋಗಿದ್ದರು. ಈಗ ಆಕಾಲಿಕ ಮಳೆಯಿಂದ ಜನ ಫುಲ್ ಖುಷ್ ಆಗಿದ್ದಾರೆ. ಹಲವು ನಿಮಿಷಗಳ ಕಾಲ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆ ಆಗಿದೆ.

ಬೀದರ್ ತಾಲೂಕಿನ ಚಿರ್ಲಗಿ ಗ್ರಾಮದಲ್ಲಿ ಸಿಡಿಲಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. 26 ವರ್ಷದ ರಾಮು ಸಿಡಿಲಿಗೆ ಬಲಿಯಾದ ಯುವಕ. ರಾಮು ಜಮೀನಿಗೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆಯಾಗಿದೆ.

Comments

Leave a Reply

Your email address will not be published. Required fields are marked *