ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು- ನೇಣಿಗೆ ಕೊರಳೊಡ್ಡಿದ ಯುವಕ

ಬೀದರ್: ಮನೆಗೆ ತಡವಾಗಿ ಬಂದ ಮಗನಿಗೆ ಪೋಷಕರು ಬುದ್ಧಿ ಮಾತು ಹೇಳಿದ್ದು, ಇದರಿಂದ ಮನನೊಂದ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನ ವಿದ್ಯಾನಗರದಲ್ಲಿ ನಡೆಸಿದೆ.

21 ವರ್ಷದ ಅಜಯ್ ಗಾಯಕವಾಡ್ ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದು, ಖಾಸಗಿ ಕಾಲೇಜಿನಲ್ಲಿ ಐಟಿಐ ಓದುತ್ತಿದ್ದ. ಇಂದು ಬೀದರ್ ನ ಚಿದ್ರಿ ರಿಂಗ್ ರೋಡ್ ಬಳಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಮನೆಯಿಂದ ಹೊರ ತೆರಳಿದ್ದ ಅಜಯ್ ಗಾಯಕವಾಡ್ ರಾತ್ರಿ ತಡವಾಗಿ ಆಗಮಿಸಿದ್ದ. ಯಾವಾಗಲೂ ಮನೆಗೆ ತಡವಾಗಿ ಆಗಮಿಸುತ್ತಿದ್ದ ಕಾರಣ ಪೋಷಕರು ಅಸಮಾಧಾನಗೊಂಡು ಬುದ್ಧಿ ಮಾತು ಹೇಳಿದ್ದರು ಎಂಬ ಮಾಹಿತಿ ಲಭಿಸಿದೆ. ಪೋಷಕರ ಮಾತಿನಿಂದ ನೊಂದ ಅಜಯ್ ಮನೆ ಬಿಟ್ಟು ತೆರಳಿ ಸಾವಿಗೆ ಶರಣಾಗಿದ್ದಾನೆ. ಈ ಕುರಿತು ಮಾಹಿತಿ ಪಡೆದ ಗಾಂಧಿಗಂಜ್ ಪೋಲಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *