ಡೇಂಜರ್ ಸ್ಟಂಟ್ ಮಾಡುತ್ತಲೇ ಫೇಮಸ್ ಆದ- ಬ್ರೂಸ್ಲಿ ಆಗೋ ಕನಸಲ್ಲಿ ಕೋಟೆನಾಡಿನ ಕೋತಿರಾಜ

ಚಿತ್ರದುರ್ಗ: ಚಿಕ್ಕಂದಿನಿಂದಲೂ ಓದು ತಲೆಗೆ ಹತ್ತದೇ ಸಾಹಸ ಚಲನಚಿತ್ರಗಳನ್ನು ನೋಡಿ ಬ್ರೂಸ್ಲಿಯ ಹಾಗೆ ಆಗಬೇಕೆನ್ನುವ ಕನಸು ಹೊತ್ತು ಮನೆಯ ಗೋಡೆಗಳನ್ನ ಹತ್ತುವುದು, ನೂರಾರು ಕೆಜಿ ತೂಕದ ಮೂಟೆಗಳನ್ನ ಎತ್ತುತ್ತಾ ಭಯಂಕರ ಸಾಹಸಗಳನ್ನು ಯುವಕನೋರ್ವ ಮಾಡುತ್ತಿದ್ದಾನೆ.

ಹೌದು. ಚಿತ್ರದುರ್ಗದ ಉಮಾದೇವಿ ಶಂಕರ ನಾರಾಯಣ ದಂಪತಿಯ ಪುತ್ರ ಫಣಿರಾಜ್ ಈ ಸಾಹಸಕ್ಕೆ ಕೈ ಹಾಕಿದ ಯುವಕ. ಈತ ಪ್ರಾಣಾಪಾಯ ತರುವಂತಹ ಭಯಂಕರ ಸಾಹಸಗಳನ್ನು ನಿರ್ಭಯವಾಗಿ ಮಾಡುತ್ತಾ ಚಿತ್ರದುರ್ಗದಾದ್ಯಂತ ಸಾರ್ವಜನಿಕರ ಪ್ರೀತಿ ಗಳಿಸಿದ್ದಾನೆ.

ಈತನಿಗೆ ಸಹಕಾರ ನೀಡುವ ಹಿರಿಯ ಪತ್ರಕರ್ತ ವೆಂಕಟಸುಬ್ಬು ಮೋಕ್ಷಗುಂಡಂರವರು ಫಣಿರಾಜ್ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿ ರಾಷ್ಟ್ರಕ್ಕೆ ಹೆಸರು ತರಲಿ ಎಂದು ಹಾರೈಸಿ ತಮ್ಮ ಶಿಷ್ಯನಿಗೆ ಬೆಂಬಲ ವ್ಯಕ್ತಪಡಿಸುತ್ತಾರೆ.

Comments

Leave a Reply

Your email address will not be published. Required fields are marked *