– ಹಣ, ವಾಚ್ ದರೋಡೆ
ತುಮಕೂರು: ಯುವಕನೋರ್ವನ ಬೈಕ್ ಅಡ್ಡಗಟ್ಟಿ, ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ ಹಣ ಮತ್ತು ವಾಚ್ ದೋಚಿದ ಘಟನೆ ನಡೆದಿದೆ.
ತುಮಕೂರು ನಗರದ ಶಾಂತಿ ನಗರದಲ್ಲಿ ಭಾನುವಾರ ರಾತ್ರಿ ಈ ದರೋಡೆ ನಡೆದಿದೆ. ಗಿರೀಶ್ ಎಂಬ ಯುವಕ ಅಮರ ಜ್ಯೋತಿನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಶಾಂತಿ ನಗರದಲ್ಲಿ ನಾಲ್ವರು ದುಷ್ಕರ್ಮಿಗಳು ಗಿರೀಶ್ ನ ಬೈಕ್ ಅಡ್ಡಗಟ್ಟಿದ್ದಾರೆ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ.

ಹಣ ನೀಡಲು ನಿರಾಕರಿಸಿದಾಗ ಚಾಕು ಮತ್ತು ಮಚ್ಚಿನಿಂದ ಹಲ್ಲೆ ನಡೆಸಿ 24 ಸಾವಿರ ನಗದು ಹಾಗೂ ವಾಚ್ ದೋಚಿದ್ದಾರೆ. ಘಟನೆಯಲ್ಲಿ ಗಿರೀಶ್ ಗೆ ಗಂಭೀರ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರೋಡೆ ನಡೆಸಿದವರನ್ನು ಧನಂಜಯ್ ಕುಮಾರ್, ರಂಗ ಮತ್ತು ಗೊಗ್ಗ ಶಶಿ ಎಂದು ಗುರುತಿಸಲಾಗಿದ್ದು, ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply