ಯುವ ನಟ, ನಿರ್ದೇಶಕ ನೆಲಮಂಗಲ ರಸ್ತೆ ಅಪಘಾತದಲ್ಲಿ ಸಾವು

ಬೆಂಗಳೂರು: ಮೇರು ಕಲಾವಿದರ ಮೆಚ್ಚುಗೆ ಗಳಿಸಿದ್ದ ಯುವ ನಟ ಮತ್ತು ನಿರ್ದೇಶಕ ಹೇಮಂತ್ ಕುಮಾರ್ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವೀರನಂಜೀಪುರ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಎರಡು ಕೈಗಳಿಲ್ಲದ ಅಂಗವಿಕಲ ಹೇಮಂತ್ ಕುಮಾರ್(25) ಮೃತ ದುರ್ದೈವಿ. ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ ಎನ್ನಲಾಗಿದೆ.

ಮೃತ ಹೇಮಂತ್ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನದೇ ಆದ ಕಿರು ಚಿತ್ರಗಳಿಗೆ ನಿರ್ದೇಶನ ಮಾಡುತ್ತಿದ್ದರು. ಅರ್ಜುನ್ ಜನ್ಯ ಹಾಗೂ ದುನಿಯಾ ವಿಜಿ ಅವರ ಮೆಚ್ಚುಗೆಗೆ ಸಹ ಪಾತ್ರರಾಗಿದ್ದರು.

ಇವರಿಗೆ ಎರಡು ಕೈ ಇಲ್ಲದ್ದಿದ್ದರೂ ಕಾಲುಗಳ ಸಹಾಯದಿಂದ ಬೈಕ್ ಚಲಾಯಿಸುವುದಲ್ಲದೇ, ಅನೇಕ ಸಾಧನೆಗಳನ್ನು ಮಾಡಿದ್ದಾರೆ. `ಹೈಕ’ ಎಂಬ ಕಿರುಚಿತ್ರಕ್ಕೆ ಧ್ವನಿ ನೀಡಿದ್ದ ಕೀರ್ತಿ ಸಹ ಈ ಉದಯೋನ್ಮುಖ ಕಲಾವಿದನಿಗೆ ಸಲ್ಲುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv  

Comments

Leave a Reply

Your email address will not be published. Required fields are marked *