ಯೋಗಿ ಸರ್ಕಾರ ಕೆಲವೇ ಬಂಡವಾಳಶಾಹಿಗಳ ಬಗ್ಗೆ ಮಾತ್ರ ಯೋಚನೆ: ಪ್ರಿಯಾಂಕಾ

ನವದಹಲಿ: ಬಡವರ, ಮಧ್ಯಮ ವರ್ಗದವರ ಮಾತನ್ನು ಕೇಳದ ಸಿಎಂ ಯೋಗಿ ಸರ್ಕಾರ ಕೆಲವೇ ಬಂಡವಾಳಶಾಹಿ ಸ್ನೇಹಿತರ ಲಾಭದ ಬಗ್ಗೆ ಯೋಚಿಸುತ್ತಿದೆ ಎಂದು ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ವಿರೋಧಿಸಿ ಪ್ರಿಯಾಂಕಾ ಅವರು ವಾಗ್ದಾಳಿ ನಡೆಸಿದ್ದು, ಯೋಗಿ ಸರ್ಕಾರ ಬಡವರು, ಮಧ್ಯಮ ವರ್ಗದವರ ಮಾತನ್ನು ಕೇಳುವುದಿಲ್ಲ. ಅವರು ಕೇವಲ ಲಾಭದ ಬಗ್ಗೆ ಮಾತ್ರ ಯೋಚಿಸುತ್ತದೆ. ಅವರು `ಬಂಡವಾಳಶಾಹಿ ಸ್ನೇಹಿತರು` ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲಿಂದು 10 ಸಾವಿರಕ್ಕೂ ಕಡಿಮೆ ಪ್ರಕರಣ ದಾಖಲು – 47 ಸಾವು

ನೋಯ್ಡಾದ ಡೂಬ್ ಪ್ರದೇಶದ ನಿವಾಸಿಗಳು ವಿದ್ಯುತ್ ಮತ್ತು ನೀರನ್ನು ಹೊಂದಲು ತಮ್ಮ ಹಕ್ಕಿಗೆ ಅರ್ಹರಾಗಿದ್ದಾರೆ ಎಂದ ಅವರು, ನೋಯ್ಡಾದ ದೂಬ್ ಪ್ರದೇಶದ ನಿವಾಸಿಗಳಿಗೆ ಅನ್ಯಾಯವನ್ನು ಮಾಡಲಾಗುತ್ತಿದೆ. ಅವರಿಗೆ ವಿದ್ಯುತ್ ಮತ್ತು ನೀರು ಪಡೆಯುವ ಎಲ್ಲ ಹಕ್ಕಿದೆ. ಈ ಸರ್ಕಾರ ಬಡವರು, ಮಧ್ಯಮ ವರ್ಗದವರ ಮಾತನ್ನು ಕೇಳುವುದಿಲ್ಲ. ಇದು ತನ್ನ ಕೆಲವೇ ಬಂಡವಾಳಶಾಹಿ ಸ್ನೇಹಿತರ ಪ್ರಯೋಜನಗಳ ಬಗ್ಗೆ ಮಾತ್ರ ಯೋಚಿಸುತ್ತದೆ. ನಾವು ಒಟ್ಟಾಗಿ ಬದಲಾವಣೆಯನ್ನು ತರಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ದೂಬ್ ಪ್ರದೇಶದ ನಿವಾಸಿಗಳಿಗಾಗಿ ನಮ್ಮ ಪಕ್ಷವು ಒಗ್ಗಟ್ಟಿನಿಂದ ನಿಂತಿದೆ. ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಈ ಮೂಲಕ ಡೂಬ್‍ಬಲ್ಲಿರುವ ನನ್ನ ಎಲ್ಲ ಸಹೋದರ, ಸಹೋದರಿಯರಿಗೆ ಹೇಳಲು ಬಯಸುತ್ತೇನೆ ಎಂದು ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Google Chrome – 8 ವರ್ಷಗಳ ನಂತರ ಹೊಸ ಲೋಗೋ!

Comments

Leave a Reply

Your email address will not be published. Required fields are marked *