ಭೀಮಾತೀರದ ಹಂತಕ ಚಂದಪ್ಪ ಅಣ್ಣ ಯಲ್ಲಪ್ಪ ಹರಿಜನ ಸಾವು!

ವಿಜಯಪುರ: ಭೀಮಾತೀರದ ಹಂತಕ ಚಂದಪ್ಪ ಹರಿಜನ ಅಣ್ಣ ಯಲ್ಲಪ್ಪ ಹರಿಜನ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಸ್ವಗ್ರಾಮ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಕಳೆದ ಹಲವು ದಿನಗಳಿಂದ ಸಕ್ಕರೆ ಕಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದ ಯಲಪ್ಪ ಹರಿಜನ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಇಂದು ಅಂತ್ಯಕ್ರಿಯೆ ಬೊಮ್ಮನಹಳ್ಳಿಯಲ್ಲಿ ನಡೆಯಲಿದೆ.

ಚಂದಪ್ಪ ಹರಿಜನ 2000ರಲ್ಲಿ ಪೊಲೀಸ್ ಎನ್‍ಕೌಂಟರಿಗೆ ಬಲಿಯಾಗಿದ್ದರು. 2013ರಲ್ಲಿ ತಮ್ಮ ಬಸಪ್ಪ ಹರಿಜನ ಬಾಗಪ್ಪ ಹರಿಜನ ಗ್ಯಾಂಗ್‍ನ ಗುಂಡೇಟ್ಟಿಗೆ ಬಲಿಯಾಗಿದ್ದರು. ಇಂದು ಯಲ್ಲಪ್ಪ ಹರಿಜನ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಭೀಮಾತೀರದ ಹಂತಕನ ಮೇಲೆ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ -ಸಾವು ಬದುಕಿನ ಮಧ್ಯೆ ಬಾಗಪ್ಪ ನರಳಾಟ 

Comments

Leave a Reply

Your email address will not be published. Required fields are marked *