ತಮ್ಮನ ಎದುರೇ ಭೀಮಾ ನದಿಯಲ್ಲಿ ಕೊಚ್ಚಿ ಹೋದ ಅಣ್ಣ

ಯಾದಗಿರಿ: ತಮ್ಮನ ಎದುರೇ ಭೀಮಾ ನದಿ ಪ್ರವಾಹಕ್ಕೆ ಅಣ್ಣ ಕೊಚ್ಚಿ ಹೋಗಿರುವ ಮನಕಲಕುವ ಘಟನೆ ಯಾದಗಿರಿ ತಾಲೂಕಿನ ಕೌಳೂರ ಗ್ರಾಮದ ಭೀಮಾ ನದಿಯಲ್ಲಿ ನಡೆದಿದೆ.

ಕೊಚ್ಚಿಹೋದ ಅಣ್ಣನನ್ನು 24 ವರ್ಷದ ರೆಡ್ಡಿ ಚಂದ್ರಪ್ಪ ಡೊಂಗೇರ್ ಎಂದು ಗುರುತಿಸಲಾಗಿದೆ. ಭೀಮಾ ನದಿ ತೀರದಲ್ಲಿ ಅಣ್ಣ ತಮ್ಮ ಸೇರಿಕೊಂಡು ಪಂಪ್ ಸೆಟ್ ತೆಗೆಯುವಾಗ ಈ ದುರ್ಘಟನೆ ಸಂಭವಿಸಿದೆ.

ನದಿಗೆ ಬಿಡಲಾಗಿದ್ದ ಪಂಪ್ ಸೆಟ್ ತೆಗೆಯಲು ಹೋದ ಚಂದ್ರಪ್ಪ ಡೊಂಗೇರ್ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಜೊತೆಯಲ್ಲೇ ಇದ್ದ ತಮ್ಮ ಬಸವರಾಜ ಅಣ್ಣನಿಗೆ ಹಗ್ಗ ಹಾಕಿ ನದಿಯಿಂದ ಎಳೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ನದಿಯೂ ರಭಸದಿಂದ ಹರಿಯುತ್ತಿರುವ ಕಾರಣ ಎಳೆದುಕೊಳ್ಳಲು ಆಗಿಲ್ಲ. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *