ಬೆಂಗ್ಳೂರಲ್ಲಿದ್ದ ಐನಾತಿ ಕಳ್ಳಿಯರಿಬ್ಬರ ಬಂಧನ

ಬೆಂಗಳೂರು: ನಗರದ ಕಳ್ಳತನ ಮಾಡುತ್ತಿದ್ದ ಇಬ್ಬರು ಖರ್ತಾನಕ್ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಉಷಾವಾಣಿ ಹಾಗೂ ಮೀನಾಕ್ಷಿ ಎಂಬ ಆರೋಪಿಗಳು ಬಸ್‍ನ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು. ಈ ಅಕ್ಕ-ತಂಗಿಯರ ಬೇಟೆಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ತಂಡ ತಿಂಗಳು ಕಟ್ಟಲೆ ಕಾದು ಕುಳಿತ್ತಿತ್ತು. ಪೊಲೀಸರ ಸತತ ಪ್ರಯತ್ನಕ್ಕೆ ಕೊನೆಗೆ ಆರೋಪಿಗಳಾದ ಉಷಾವಾಣಿ ಹಾಗೂ ಮೀನಾಕ್ಷಿ ಸಿಕ್ಕಿಬಿದ್ದಿದ್ದಾರೆ.

ಸತತ ಎರಡು ತಿಂಗಳುಗಳ ಕಾಲ ಆರ್ ಎಂ ಸಿ ಯಾರ್ಡ್ ಪೊಲೀಸರು ಬಸ್ ನಿಲ್ದಾಣದಲ್ಲೇ ಠಿಕಾಣಿ ಹೂಡಿ ಮಫ್ತಿಯಲ್ಲೇ ನಿಂತು ಆರೋಪಿಗಳ ಭೇಟೆಯಾಡಿದ್ದಾರೆ. ಪೊಲೀಸರು ಕಳ್ಳಿಯರನ್ನ ವಾಚ್ ಮಾಡಿ ಹಿಡಿದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *