ನಾಪತ್ತೆಗೂ ಮುನ್ನ ಖತರ್ನಾಕ್ ಪ್ಲಾನ್ ಮಾಡಿದ್ದ ಯುವತಿ, ಮಕ್ಕಳು

ಬೆಂಗಳೂರು: ನಗರದ ಹೊರವಲಯ ಹೆಸರುಘಟ್ಟ ರಸ್ತೆಯ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಹಾಗೂ ಮೂವರು ಮಕ್ಕಳು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಪ್ರಕರಣಕ್ಕೂ ಮುನ್ನ ಈ ನಾಲ್ವರು ಖತರ್ನಾಕ್ ಪ್ಲಾನ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಇಂದು ಬೆಳಗ್ಗೆ ನಾಲ್ವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮನೆ ಬಿಡುವ ಮುನ್ನ ಯುವತಿ ಹಾಗೂ ಮೂವರು ಮಕ್ಕಳು ಖತರ್ನಾಕ್ ಪ್ಲಾನ್ ಮಾಡಿಕೊಂಡು ಜರ್ನಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನ ಒಂದೆಡೆ ಸಂಗ್ರಹ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

ಮೂವರು ಮಕ್ಕಳಿಗೆ ಮಾಸ್ಟರ್ ಮೈಂಡ್ ಯುವತಿ ವರ್ಷಿಣಿ ಹಾಗೂ ಮಕ್ಕಳ ಮನೆಯಿಂದ ಹೊರಗೆ ಬಂದು ಅಗತ್ಯವಾದ ವಸ್ತುಗಳನ್ನ ಸಾಗಿಸಿಕೊಂಡು ನಂತರ ಮನೆ ಬಿಟ್ಟು ನಿಗೂಢವಾಗಿ ಕಾಣೆಯಾಗಿದ್ದರು. 50 ಗಂಟೆಯ ಬಳಿಕ ಈ ನಾಲ್ವರು ಮಂಗಳೂರಿನಲ್ಲಿ ಆಟೋ ಚಾಲಕನ ನೆರವಿನಿಂದ ಪತ್ತೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *