ಸಾಯುವ ಹಂತದಲ್ಲಿದ್ದೇನೆ ಎಂದು ತಿಳಿದು 30 ಸಾವಿರ ಸಸಿನೆಟ್ಟ ಯುವತಿ

ಗಾಂಧಿನಗರ: ಕೊನೆಯ ಹಂತದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದೇನೆ ಎನ್ನುವುದನ್ನು ತಿಳಿದ ಯುವತಿ 30 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.

ಗುಜರಾತಿನ ಸೂರತ್ ನಿವಾಸಿಯಾಗಿರುವ ಶ್ರುಚಿ ವಡಲಿಯಾ ಅವರಿಗೆ ಕೆಲವು ತಿಂಗಳ ಹಿಂದೆ ತಾನು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದು ತಿಳಿಯಿತು. ಹಾಗಾಗಿ ಅವರು ಪರಿಸರವನ್ನು ಉಳಿಸುವ ಅಭಿಯಾನವನ್ನು ಶುರು ಮಾಡಿದ್ದರು.

ವಾಯು ಮಾಲಿನ್ಯದಿಂದ ನನಗೆ ಈ ಕಾಯಿಲೆ ಬಂದಿರುವುದು ತಿಳಿಯಿತು. ಮರಗಳನ್ನು ನೆಟ್ಟರೆ ಅನೇಕರನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಬಹುದು. ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ ಜನರ ಉಸಿರಾಟದಲ್ಲಿ ಬದುಕಲು ನಾನು ಬಯಸುತ್ತೇನೆ ಎಂದು ಶ್ರುಚಿ ತಿಳಿಸಿದ್ದಾರೆ.

ನಾನು 30 ಸಾವಿರ ಗಿಡಗಳನ್ನು ನೆಟ್ಟಿದ್ದೇನೆ. ಅಲ್ಲದೆ ಅದೇ ರೀತಿ ಮಾಡಲು ಅನೇಕರನ್ನು ಪ್ರೇರೇಪಿಸಿದ್ದೇನೆ. ಬ್ರೈನ್ ಟ್ಯೂಮರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೂ ನಾನು ನನ್ನ ಉದ್ದೇಶದ ಅರ್ಥವನ್ನು ಕಳೆದುಕೊಳ್ಳಲಿಲ್ಲ ಎಂದರು.

ನನ್ನ ಜೀವನವನ್ನು ನಡೆಸಲು ಹಾಗೂ ಕನಸುಗಳನ್ನು ಈಡೇರಿಸಲು ನನಗೆ ಹೆಚ್ಚು ಸಮಯವಿಲ್ಲ. ಆದರೆ ಬೇರೆಯವರು ನನ್ನ ಎದುರಿಸಿದ ಕಷ್ಟವನ್ನು ಬೇರೆಯವರು ಎದುರಿಸಬಾರದು. ಹಾಗಾಗಿ ಎಲ್ಲರು ಸಸಿಗಳನ್ನು ನೆಡಬೇಕು. ಅದು ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ಶ್ರುಚಿ ಹೇಳಿದ್ದಾರೆ.

ನಾನು ಹಲವು ಹಳ್ಳಿಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡುವಂತೆ ಮನವಿ ಮಾಡಿದ್ದೇನೆ. ನಮ್ಮೆಲ್ಲರ ಭವಿಷ್ಯವನ್ನು ಉಳಿಸಲು ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ನೀಡುವುದು ಉತ್ತಮ ಕೆಲಸ ಎಂದು ಶ್ರುಚಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *