ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

ಹೈದ್ರಾಬಾದ: ಗುಂಟೂರು ಜಿಲ್ಲೆಯ ವೆನಿಗ್ಲಾಂಡಾದಲ್ಲಿ ಪ್ರಿಯತಮೆಯೊಬ್ಬಳು ಆಕೆಯ ಮಾಜಿ ಪ್ರೇಮಿ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಗುಂಟೂರು ಜಿಲ್ಲೆಯ ತಡಿಕೊಂಡ ಪಮುಲಪಡು ಗ್ರಾಮದ ಇಲಿಯಾಸ್ ಮತ್ತು ವೆನಿಗ್ಲಾಂಡದ ಹಿಮಾಬಿಂದು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜಿನಲ್ಲಿ ಫಾರ್ಮಾಸಿ ಓದುತ್ತಿದ್ದರು. ಕಾಲೇಜು ಪದವಿ ದಿನಗಳಿಂದಲೂ ಇಲಿಯಾಸ್ ಮತ್ತು ಬಿಂದು ಸ್ನೇಹಿತರಾಗಿದ್ದರು.

ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

ಇದ್ದಕ್ಕಿದ್ದಂತೆ ಇವರ ಪ್ರೇಮ ಸಂಬಂಧವೂ ಮುರಿದು ಬಿದ್ದಿತ್ತು. ಮಂಗಳವಾರ ಇಲಿಯಾಸ್ ಮತ್ತೊಂದು ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಅವಮಾನವಾದ ಬಿಂದು ಅದಕ್ಕಾಗಿ ಪ್ರತೀಕಾರ ತೀರಿಸಲು ಅದಕ್ಕಾಗಿ ಇಲಿಯಾಸ್‍ನ್ನು ಭೇಟಿಯಾಗಲು ಕರೆದು, ಅವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ತೀವ್ರವಾಗಿ ಗಾಯಗೊಂಡ ಇಲಿಯಾಸ್ ಗುಂಟೂರು ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೈತಪಟ್ಟಿದ್ದಾನೆ.

ಇಲಿಯಾಸ್ ಕುಟುಂಬ ಸದಸ್ಯರು ಬಿಂದುವಿನ ಜೊತೆ ಸಂಬಂಧವಿರುವುದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಮಂಗಲಗಿರಿ ಸಿ.ಐ. ಬ್ಯಹ್ಮಯ್ಯ ಅವರು ಬಿಂದು ಮತ್ತು ಆಕೆಯ ಕೃತ್ಯಕ್ಕೆ ಸಹಾಯ ಮಾಡಿದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.

 

Comments

Leave a Reply

Your email address will not be published. Required fields are marked *