ಯುವಕನ ಮೇಲೆ ಆ್ಯಸಿಡ್ ಎಸೆದ ಮಹಿಳೆ

ಬೆಳಗಾವಿ: ಮಹಿಳೆಯಿಂದ ಯುವಕನ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಜಿಲ್ಲೆಯ ಕಪೀಲೇಶ್ವರ ಮಂದಿರದ ಬಳಿ ನಡೆದಿದೆ.

ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮಾ ಪೂಜಾರಿ ಸಹೋದರಿ ಮಾಧವಿಯಿಂದ ಈ ಕೃತ್ಯ ನಡೆದಿದೆ. ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಪ್ರಥಮೇಶ್ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಅರ್ಚಕ ರಾಮಾ ಪೂಜಾರಿ ಹಾಗೂ ಆಸ್ಯಿಡ್ ದಾಳಿಗೆ ಒಳಗಾದ ಯುವಕ ನಡುವೆ ಘರ್ಷಣೆ ನಡೆದಿದ್ದು, ಭಕ್ತರ ಜೊತೆ ಅರ್ಚಕನ ಅನುಚಿತ ವರ್ತನೆಗೆ ಬಗ್ಗೆ ಹಲವು ಬಾರಿ ಪ್ರಥಮೇಶ್ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಪ್ರಥಮೇಶ್ ಮೇಲೆ ಅರ್ಚಕ ಸಹೋದರಿ ಆ್ಯಸಿಡ್ ದಾಳಿ ನಡೆಸಿದ್ದಾಳೆ.

ಆ್ಯಸಿಡ್ ದಾಳಿಯಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಅರ್ಚಕ ಗೋಪಾಲ್ ಪೂಜಾರಿಯನ್ನ ಅರೆಬೆತ್ತಲೆ ಮಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಭಕ್ತರೊಂದಿಗೆ ಗೋಪಾಲ್ ಪೂಜಾರಿ ನಡುವಳಿಕೆ ಸರಿಯಾಗಿ ಇರಲಿಲ್ಲ. ಈ ಹಿಂದೆ ಕೂಡಾ ಅರ್ಚಕನ ಮಗ ದೇವಸ್ಥಾನದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಆ್ಯಸಿಡ್ ದಾಳಿಯಿಂದ ಯುವಕ ಪ್ರಥಮೇಶ್ ಕೈಗೆ ಗಾಯವಾಗಿದ್ದು, ಗಾಯಾಳು ಪ್ರಥಮೇಶ್ ನನ್ನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆ ಸಂಬಂಧ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *