ನಟನಿಗಾಗಿ ಪತಿಯನ್ನೇ ಕೊಂದ ಪತ್ನಿ

ಬೆಂಗಳೂರು: ನಟನ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಪತ್ನಿಯೊಬ್ಬಳು ಪತಿಯನ್ನೇ ಕೊಂದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

36 ವರ್ಷದ ಸತೀಶ್ ಕೊಲೆಯಾದ ಪತಿ. ಮೂಲತಃ ತುಮಕೂರಿನವನಾದ ಸತೀಶ್ ಬೆಂಗಳೂರಲ್ಲಿ ಸೆಕ್ಯುರಿಟಿ ಸೂಪರ್ವೈಸರ್ ಆಗಿ ಕೆಲಸ ಮಾಡ್ತಿದ್ದರು. ಕಲ್ಪನಾ ಜೊತೆ ಮದುವೆಯಾಗಿ ಎರಡು ಮಕ್ಕಳೂ ಕೂಡ ಇವೆ. ಆದ್ರೆ ಚಿತ್ರನಟನೊಬ್ಬನ ಜೊತೆಗಿನ ಅಕ್ರಮ ಸಂಬಂಧಕ್ಕೆ ಪತ್ನಿ ಕಲ್ಪನಾ ತನ್ನ ಪತಿಗೆ ಪರಲೋಕದ ದಾರಿ ತೋರಿಸಿದ್ದಾಳೆ. ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿ ಮೂರ್ನಾಕು ದಿನಗಳ ಹಿಂದೆ ಈ ಕೊಲೆ ನಡೆದಿದೆ.

ಕಲ್ಪನಾ ಕುಂಬಳಕಾಯಿ ಸಾರು ಹಾಗೂ ಪಲ್ಯಕ್ಕೆ ನಿದ್ರೆ ಮಾತ್ರೆ ಹಾಕಿ ನಂತರ ಕಲ್ಲಿನಿಂದ ಪತಿ ಸತೀಶ್ ಮುಖವನ್ನು ಜಜ್ಜಿ ಕೊಲೆ ಮಾಡಿದ್ದಳು. ಪತ್ನಿ ಕಲ್ಪನಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ. ನಟ ಕೂಡ ಮಾರುವೇಶಗಳಲ್ಲಿ ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಕಲ್ಪನಾ ಹಾಗೂ ನಟ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *