ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

ಕೊಯಂಬತ್ತೂರು: ಚಿರತೆಯೊಂದಿಗೆ ಮಹಿಳೆಯೊಬ್ಬರು ಸೆಣಸಾಡಿ ತನ್ನ 11 ವರ್ಷದ ಮಗಳನ್ನು ಕಾಪಾಡಿಕೊಂಡ ಘಟನೆ ವಾಲ್ಪಾರೈ ನಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಮುತ್ತುಲಕ್ಷ್ಮೀ ಎಂಬವರು ಮಗಳನ್ನು ಕಾಪಾಡಿಕೊಂಡ ಧೈರ್ಯವಂತ ತಾಯಿ. ಮುತ್ತುಲಕ್ಷ್ಮೀ ಮಗಳು ಸತ್ಯಾ ಜೊತೆ ಕಳೆದ ರಾತ್ರಿ ಹಿತ್ತಲಿನಲ್ಲಿ ಮರದ ಕಡ್ಡಿಗಳನ್ನು ಆಯುತ್ತಿದ್ದರು. ತಕ್ಷಣ ಪ್ರತ್ಯಕ್ಷವಾದ ಚಿರತೆಯೊಂದು ಸತ್ಯಳ ಮೇಲೆ ಹಾರಿ ಕುತ್ತಿಗೆಗೆ ಬಾಯಿ ಹಾಕಿ ಹಿಡಿದು ಎಳೆದಾಡಿದೆ.

ಇದನ್ನು ಕಂಡ ಮುತ್ತುಲಕ್ಷ್ಮಿ ಧೈರ್ಯದಿಂದ ಕೈಯ್ಯಲಿದ್ದ ಕಟ್ಟಿಗೆಯಿಂದಲೇ ಚಿರತೆಗೆ ಬಾರಿಸಿದ್ದಾರೆ. ಏಟು ತಿಂದ ಚಿರತೆ ಸ್ಥಳದಿಂದ ಓಡಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಸತ್ಯಳನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಮುಂದಾಗಿದ್ದಾರೆ. ಕಳೆದ 10 ದಿನಗಳಿಂದ ಅದೇ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿದೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *