ದರ್ಪ ತೋರಿದ ಅಧಿಕಾರಿಯ ಮೈಚಳಿ ಬಿಡಿಸಿದ ಮಹಿಳಾ ಕಾರ್ಪೋರೇಟರ್

ಬೆಂಗಳೂರು:  ದರ್ಪತೋರಿದ ಅಧಿಕಾರಿಗೆ ಮಹಿಳಾ ಕಾರ್ಪೋರೇಟರ್ ಒಬ್ಬರು ಮೈಚಳಿ ಬಿಡಿಸಿದ ಘಟನೆ ಬಿಬಿಎಂಬಿ ಕಚೇರಿಯಲ್ಲಿ ನಡೆದಿದೆ.

ಬಿಬಿಎಂಪಿಯ ಮೇಯರ್ ಆಪ್ತ ಸಹಾಯಕ ಅಧಿಕಾರಿ ದರ್ಪ ತೋರಿದಕ್ಕೆ ಮಹಿಳಾ ಕಾರ್ಪೋರೇಟರ್ ಒಬ್ಬರು ಅಧಿಕಾರಿಯ ಮೈಚಳಿ ಬಿಡಿಸಿದ್ದಾರೆ.

ಮೇಯರ್ ಸಂಪತ್ ರಾಜ್ ಆಪ್ತ ಸಹಾಯಕ ಪುಟ್ಟರಾಜು ರವರು ಮೆಡಿಕಲ್ ಫಂಡ್ ಬಿಡುಗಡೆ ಮಾಡಲು ಅನಗತ್ಯ ವಿಳಂಬ ಮಾಡುತ್ತಿದ್ದರು. ಮೇಯರ್ ಮಾತಿಗೂ ಬೆಲೆ ಕೊಡದೆ ವೈದ್ಯಕೀಯ ಹಣ ಬಿಡುಗಡೆ ಮಾಡದೇ ಜನಪ್ರತಿನಿಧಿಗಳನ್ನೇ ಅಲೆದಾಡಿಸಿದ್ದಾರೆ. ಹಾಗಾಗಿ ಅಧಿಕಾರಿಯ ಕಾಟಕ್ಕೆ ಆಕ್ರೋಶಗೊಂಡ ಕಾರ್ಪೋರೇಟರ್ ಸರಳಾರವರು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಯರ್ ಮಾತಿಗೂ ಬಗ್ಗದೇ ವಿನಾಕಾರಣ ಕಿರಿಕಿರಿ ಮಾಡಿದರೆ ಹೇಗೆ? ಮೊದಲು ಮಹಿಳೆ ಅನ್ನೊ ಮರ್ಯಾದೆ ಕೊಡಿ. ಇಂಥ ನಡವಳಿಕೆ ಇಟ್ಕೊಂಡ್ರೆ ನನ್ನ ಮುಂದೆ ನಡೆಯಲ್ಲ ಅಂತಾ ಎಚ್ಚರಿಕೆ ನೀಡಿದ್ದಾರೆ.

ಹೀಗೆ ಮಹಿಳಾ ಕಾರ್ಪೋರೇಟರ್ ಸರಳಾರವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ಕಾರ್ಪೋರೇಟರ್ ಮಾತಿಗೆ ತುಟಿ ಬಿಚ್ಚದ ಅಧಿಕಾರಿ ಅಲ್ಲಿಂದ ಕಾಲು ಕಿತ್ತಿದ್ದಾರೆ.

https://www.youtube.com/watch?v=ks3RYzqKdAA

Comments

Leave a Reply

Your email address will not be published. Required fields are marked *