ಊರ ಹಬ್ಬಕ್ಕೆ ಬಂದು ಇಬ್ಬರ ಮಕ್ಕಳ ಜೊತೆ ಕೆರೆಗೆ ಬಿದ್ದು ಗೃಹಿಣಿ ಆತ್ಮಹತ್ಯೆ

ರಾಮನಗರ: ಇಬ್ಬರ ಮಕ್ಕಳ ಜೊತೆ ಕೆರೆಗೆ ಬಿದ್ದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

ತಾಯಿ ಸುಜಾತ(26), ಮಕ್ಕಳಾದ ವಿಶಾಲ್(4) ಮತ್ತು ನಕುಲ್(6) ಮೃತ ದುರ್ದೈವಿಗಳು. ಶನಿವಾರ ಸಂಜೆ ಗ್ರಾಮದ ಊರ ಹಬ್ಬಕ್ಕೆ ಬಂದಿದ್ದ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂಟು ವರ್ಷದ ಹಿಂದೆ ತಾವರೆಕೆರೆಯ ಅಂಜನಮೂರ್ತಿ ಎಂಬವರನ್ನ ಮೃತ ಸುಜಾತ ವಿವಾಹವಾಗಿದ್ದರು. ಬೆಂಗಳೂರು ದಕ್ಷಿಣ ತಾಲೂಕಿನ ಮುದ್ದಯ್ಯನಪಾಳ್ಯ ಗ್ರಾಮಕ್ಕೆ ವಾಪಸ್ ಹೋಗುವುದಾಗಿ ಹೇಳಿ ಹೋಗಿದ್ದ ತಾಯಿ ಸುಜಾತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ಸಂಜೆ ಶವಗಳು ಕೆರೆಯಲ್ಲಿ ತೇಲುವಾಗ ಘಟನೆ ಬೆಳಕಿಗೆ ಬಂದಿದೆ.

ಸುಜಾತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *