ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ- ಪತಿ ಮನೆಯ ವಿರುದ್ಧ ಕೊಲೆ ಆರೋಪ

ಕೊಪ್ಪಳ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಸ ದುರ್ಗಾ ಗ್ರಾಮದಲ್ಲಿ ನೆಡದಿದೆ.

ಲಕ್ಷ್ಮಿ ನೇಣು ಬಿಗಿದುಕೊಂಡು ಮೃತಪಟ್ಟ ಮಹಿಳೆ. ಆಕೆಯ ಗಂಡನ ಮನೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಲಕ್ಷ್ಮಿಯ ತವರು ಮನೆಯವರು ಇದು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ.

ಗಂಗಾವತಿ ತಾಲೂಕಿನ ಮೈಲಾಪುರ್ ಲಕ್ಷ್ಮಿಯ ತವರು ಮನೆಯಾಗಿದ್ದು, 5 ವರ್ಷದ ಹಿಂದೆ ಹಂಪಸ ದುರ್ಗಾ ಗ್ರಾಮದ ರವಿಯಪ್ಪ ಎಂಬಾತನ ಜೊತೆ ಮದುವೆಯಾಗಿತ್ತು. ಮದುವೆ ಆದಾಗಿನಿಂದ ಕೂಡ ಲಕ್ಷ್ಮಿಗೆ ವರದಕ್ಷಿಣೆ ಕಿರುಕುಳವನ್ನು ಕೊಡಲಾಗುತ್ತಿತ್ತು. ಈ ಸಂಬಂಧ ನಮ್ಮ ಮಗಳನ್ನು ಅವರೇ ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ ಎಂದು ಲಕ್ಷ್ಮಿಯ ತವರು ಮನೆ ಕಡೆಯವರು ಆರೋಪ ಮಾಡುತ್ತಿದ್ದಾರೆ.

ಈ ಬಗ್ಗೆ ಗಂಗಾವತಿಯ ಗ್ರಾಮೀಣ ಠಾಣೆಗೆ ದೂರು ನೀಡಲು ಹೋದರೆ ಲಕ್ಷ್ಮಿ ಪತಿ ರವಿಕುಮಾರ್ ಮತ್ತು ಮನೆಯವರು ಕೆಲವು ಮುಖಂಡರು ಹಾಗೂ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷ ಪತಿ ಸಿದ್ದಪ್ಪ ನಿರಲೂಟಿ ಇವರುಗಳಿಂದ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.

ಲಕ್ಷ್ಮಿಯನ್ನು ಕಳೆದುಕೊಂಡಿರುವ ಕುಟುಂಬ ಪೊಲೀಸ್ ಠಾಣೆ ಮುಂದೆ ಕೇಸ್ ದಾಖಲಿಸಲು ಒತ್ತಾಯಿಸಿ, ಕೆಲಸಮಯ ಪೊಲೀಸರ ನಡುವೆ ಮಾತಿನ ಚಕಮಕಿ ನೆಡೆದಿದೆ. ಆದ್ರೆ ಲಕ್ಷ್ಮಿ ಮನೆಯ ಕಡೆಯುವರು ಮಾತ್ರ ಇದು ಆತ್ಮಹತ್ಯೆ ಅಲ್ಲ ಕೊಲೆ. ಈ ಕುರಿತು ತನಿಖೆ ಆಗಬೇಕು ಅಲ್ಲಿಯವರೆಗೂ ನಾವು ಠಾಣೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.

 

Comments

Leave a Reply

Your email address will not be published. Required fields are marked *