ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ

ಬೆಂಗಳೂರು: ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿರುವ ಪ್ರಕರಣವೊಂದು ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

ಅನಿತಾ(50) ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ. ಅನಿತಾ ತುಂಬು ಗರ್ಭೀಣಿ ಜಯದೇವಿ(29)ಯನ್ನು ಬಾಯಿಂದ ಕಚ್ಚಿ ಗಂಭೀರ ಗಾಯಗೊಳಿಸಿದ್ದಾಳೆ. ಇದನ್ನು ತಡೆಯಲು ಬಂದ ಜಯದೇವಿ ತಂಗಿ ಅನಿತಾ ಮಡಿವಾಳಗೂ ಆಕೆ ಕಚ್ಚಿ ಗಾಯಗೊಳಿಸಿದ್ದಾಳೆ.

ನೀರಿಗಾಗಿ ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿ ಇಬ್ಬರು ಸಹೋದರಿಯರನ್ನು ಗಾಯಗೊಳಿಸಿದ್ದು, ಗಾಯಾಳುಗಳು ರಾಜಾನುಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಾನುಕುಂಟೆಯಲ್ಲಿ ಈ ನೀರಿನ ಜಗಳ ನಡೆದಿದೆ.

ಅನಿತಾ ಮತ್ತು ಆಕೆಯ ಇಬ್ಬರು ಮಕ್ಕಳು ನ್ಯಾಯ ಕೇಳಲು ಬಂದ ಗರ್ಭಿಣಿಯ ಯಜಮಾನ ಶಂಕರ್ ಅವರ ಮೇಲು ಹಲ್ಲೆ ನಡೆಸಿದ್ದಾರೆ. ಶಂಕರ್ ದಂಪತಿ ಸಿಂಗನಾಯಕನಹಳ್ಳಿಯ ರಾಜಣ್ಣ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ. ಪಕ್ಕದ ಮನೆಯವಳಾದ ಅನಿತಾ ಜಗಳ ತೆಗೆದಿದ್ದನ್ನು ಶಂಕರ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಶಂಕರ್ ತನ್ನ ಪತ್ನಿ, ನಾದಿನಿ ಮತ್ತು ತನ್ನ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜಾನುಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *