ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ರಣಕಹಳೆ ಊದಿರುವ ಜೆಡಿಎಸ್ ಇಂದು ಸ್ವಾಭಿಮಾನಿ ಸಮಾನತೆ ಸಮಾವೇಶ ನಡೆಸಿತು. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಎಚ್ಡಿ ರೇವಣ್ಣ ಸೇರಿದಂತೆ ಜೆಡಿಎಸ್ ಪಕ್ಷ ಮುಖಂಡರು ಭಾಗವಹಿಸಿದ್ದರು.
ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಜೆಡಿಎಸ್ ಕಚೇರಿಗೆ ಜೆಪಿ ಭವನ ಅಂತ ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವ ರಾಜಕೀಯ ನಿರ್ಣಯ ಅಂಗೀಕಾರ ಮಾಡಲಾಯ್ತು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಒಂದೇ ವರ್ಷದಲ್ಲಿ ಜೆಪಿ ಭವನ ನಿರ್ಮಾಣ ಮಾಡಿದ್ದೇವೆ, ಮಹಾತ್ಮಾ ಗಾಂಧಿ ಬಿಟ್ಟರೆ, ನಾನು ಜಯಪ್ರಕಾಶ್ ನಾರಾಯಣ ಅವರನ್ನು ಒಪ್ಪಿದ್ದೇನೆ. ಹೀಗಾಗಿ ಅವ್ರ ಹೆಸ್ರನ್ನ ಕಚೇರಿಗೆ ಇಟ್ಟಿದ್ದೇನೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೆಸರನ್ನು ಹೇಳದೇ ಪರೋಕ್ಷ ವಾಗ್ದಾಳಿ ನಡೆಸಿದ ದೇವೇಗೌಡರು, ಮಠಾಧೀಶರೊಬ್ಬರು 30 ಕೋಟಿ ಜನ ಸಂಖ್ಯೆ ರಾಜ್ಯವನ್ನ ಆಳುತ್ತಿದ್ದಾರೆ. ಮುಂದೆ ಏನಾಗುತ್ತೋ ಈ ದೇಶ? ನಾನು 10 ತಿಂಗಳು ದೇಶದ ಅಧಿಕಾರ ನಡೆಸಿದ್ದೇನೆ. ಎಲ್ಲರಿಗೂ ಸಮಾನ ಅವಕಾಶ ನೀಡಿದ್ದೇನೆ ಎಂದರು.
ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೇ? ಬೇಡವೋ ಎಂಬುದನ್ನು ರಾಜ್ಯದ 6 ಕೋಟಿ ಜನ ತೀರ್ಮಾನ ಮಾಡಬೇಕು. ದೇಶದಲ್ಲಿ ಜನತಾ ಪರಿವಾರ ಒಂದೂಗೂಡಿಸುವ ಮೊದಲು ರಾಜ್ಯದಲ್ಲಿ ಒಂದಾಗಬೇಕು. ಆ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿರಾದ ಕಲಾವಿದರೊಬ್ಬರು ಕುಮಾರಸ್ವಾಮಿ ಅವಧಿಯಲ್ಲಿ ಆದ ಕೆಲಸ ಕುರಿತು ಗೀತೆ ರಚಿಸಿ ಪ್ರಸಾರ ಮಾಡಲಾಯಿತು. ಈ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು.
ಇದನ್ನೂ ಓದಿ: ಬಿಜೆಪಿ ಎಲೆಕ್ಷನ್ಗೆ ಜನಾರ್ದನ ರೆಡ್ಡಿಯಿಂದ 500 ಕೋಟಿ ಹಣ:ಎಚ್ಡಿಕೆ ಬಾಂಬ್








ದೂರದ ತಾಂಡಾಗಳಿಂದ ಬಂದ ಲಂಬಾಣಿ ತಾಯಂದಿರು ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಮನತುಂಬಿ ಹಾರೈಸಿದರು.#JDS #JDSRally pic.twitter.com/yo65QKLaqX
— Kumaraswamy for CM (@Kumaraswamy4cm) March 23, 2017
ಮಾಜಿ ಪ್ರಧಾನಿ ದೇವೆ ಗೌಡ ಅವರಿಂದ ಜೆ.ಪಿ ಅವರ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ. #JDSRALLY, #JPJDSRally #NammaHDK pic.twitter.com/15HNMExxCV
— Kumaraswamy for CM (@Kumaraswamy4cm) March 23, 2017

Leave a Reply