ಗಾಯದ ಸಮಸ್ಯೆ ಬಗ್ಗೆ ಧೋನಿ ಪ್ರತಿಕ್ರಿಯೆ

ಚೆನ್ನೈ: ಹಲವು ಸಮಯದಿಂದ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿಶ್ವಕಪ್‍ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ತಾವು ಫಿಟ್ ಆಗಿದ್ದರೂ ಕೂಡ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ. ವಿಶ್ವಕಪ್‍ಗೆ ಕೆಲ ದಿನಗಳಷ್ಟೇ ಬಾಕಿ ಇರುವುದರಿಂದ ಈ ತಯಾರಿ ಬಹುಮುಖ್ಯ. ಒಂದೊಮ್ಮೆ ಸಮಸ್ಯೆ ಉಂಟಾದರೆ ಖಂಡಿತವಾಗಿಯೂ ಕೂಡ ವಿರಾಮ ತೆಗೆದುಕೊಳ್ಳುತ್ತೇನೆ ಎಂದು ಹೈದರಾಬಾದ್ ಪಂದ್ಯದ ಬಳಿಕ ಮಾತನಾಡಿದ ಧೋನಿ ಹೇಳಿದ್ದಾರೆ.

ಇತ್ತೀಚೆಗೆ ಧೋನಿ ಚೆನ್ನೈ ತಂಡದ ಪರ ಒಂದು ಪಂದ್ಯದಲ್ಲಿ ಅಲಭ್ಯರಾಗಿದ್ದರು. 2010ರ ಬಳಿಕ ಚೆನ್ನೈ ತಂಡದ ಪರ ಧೋನಿ ಮೊದಲ ಬಾರಿಗೆ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ ಎಂಬುವುದು ಇಲ್ಲಿ ಗಮನಾರ್ಹವಾಗಿತ್ತು. ಹೈದರಾಬಾದ್ ವಿರುದ್ಧ ಆಡಿದ್ದ ಈ ಪಂದ್ಯದಲ್ಲಿ ತಂಡವನ್ನು ರೈನಾ ಮುನ್ನಡೆಸಿದ್ದರು. ಆದರೆ ಪಂದ್ಯದಲ್ಲಿ ಸಿಎಸ್‍ಕೆ 6 ವಿಕೆಟ್‍ಗಳ ಅಂತರದಿಂದ ಸೋಲುಂಡಿತ್ತು.

ಗಾಯದ ಸಮಸ್ಯೆಯಿಂದಲೇ ಧೋನಿ ಮುನ್ನೆಚ್ಚರಿಕೆ ವಹಿಸಿ ಪಂದ್ಯದಿಂದ ದೂರ ಉಳಿದಿದ್ದರು. ಈ ವೇಳೆ ಅಭಿಮಾನಿಗಳಲ್ಲಿ ಧೋನಿ ಅವರ ಬಗ್ಗೆ ಸಾಕಷ್ಟು ಆತಂಕ ಎದುರಾಗಿತ್ತು. ವಿಶ್ವಕಪ್ ಸಂದರ್ಭದಲ್ಲಿ ಧೋನಿ ಗಾಯದ ಸಮಸ್ಯೆಗೆ ಸಿಲುಕಿದರೆ ತಂಡಕ್ಕೆ ನಷ್ಟವಾಗುತ್ತದೆ ಎಂಬುವುದು ಹಲವು ಅಭಿಮಾನಿಗಳ ಅಭಿಪ್ರಾಯವಾಗಿದೆ. ಅದ್ದರಿಂದಲೇ ಮತ್ತೆ ಸಮಸ್ಯೆ ಉಲ್ಬಣಿಸಬಹುದು ಎಂಬ ಚರ್ಚೆ ಹೆಚ್ಚು ಕೇಳಿ ಬಂದಿತ್ತು.

Comments

Leave a Reply

Your email address will not be published. Required fields are marked *