ಬೆಂಗಳೂರು: ನಟ ಅರ್ಜುನ್ ಸರ್ಜಾ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಕಾವು ಜೋರಾಗಿದ್ದು ಇಂದು ಅರ್ಜುನ್ ಗೆ ನಿರ್ಣಾಯಕ ದಿನ ಆಗಲಿದೆ.
ಇಡೀ ಘಟನಾವಳಿಗಳ ಪ್ರಮುಖ ಸಾಕ್ಷ್ಯಗಳಾಗಿರುವ ಬೋರೇಗೌಡ ಮತ್ತು ಕಿರಣ್ ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಅರ್ಜುನ್ ಸರ್ಜಾ ಕಾರಿನಲ್ಲಿ ಹೋಗುತ್ತಿದ್ದ ಶೃತಿಯನ್ನು ರೆಸಾರ್ಟ್ ಗೆ ಕರೆದಿದ್ದು, ರಿಹರ್ಸಲ್ ಸಮಯದಲ್ಲಿ ಶೃತಿ ಜೊತೆ ಅನುಚಿತ ವರ್ತನೆ ಆರೋಪಕ್ಕೆಲ್ಲಾ ಇಂದು ಹೇಳಿಕೆ ನೀಡಲಿದ್ದಾರೆ.

ಎರಡು ವರ್ಷದ ಹಿಂದೆ ಬೋರೇಗೌಡ ಅವರು ಶೃತಿ ಮ್ಯಾನೇಜರ್ ಆಗಿದ್ದು, ಕಿರಣ್ ಮೇಕಪ್ ಮನ್ ಆಗಿದ್ದರು. ಇಬ್ಬರು ವಿಚಾರಣೆಗೆ ಹಾಜರಾಗ್ತಾ ಇರೋದ್ರಿಂದ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಬ್ಬರು ಕೂಡ ಶೃತಿಯ ಆಪ್ತರೇ ಆಗಿರುವುದರಿಂದ ನಟಿ ಪರವಾಗಿಯೇ ಹೇಳಿಕೆಗಳು ಬರಬಹುದು ಎಂಬ ನಿರೀಕ್ಷೆ ಇದೆ.
ಈ ಹೇಳಿಕೆಗಳನ್ನೇ ಆಧರಿಸಿ ಅರ್ಜುನ್ ಬಂಧನ ಸನಿಹ ಮಾಡ್ತಾರಾ ಗೊತ್ತಿಲ್ಲ. ಆದರೆ ಎರಡು ವರ್ಷದ ಹಿಂದಿನ ಪ್ರಕರಣ ಆಗಿರೋದ್ರಿಂದ ಸಾಕ್ಷ್ಯಗಳನ್ನು ಕಲೆ ಹಾಕಿದ ಬಳಿಕ ಅರ್ಜುನ್ ಬಂಧನ ಮಾಡುವ ಸಾಧ್ಯತೆ ಇದೆ. ಇನ್ನುಳಿದ 4 ಸಾಕ್ಷ್ಯಗಳನ್ನು ವಿಚಾರಣೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
https://www.youtube.com/watch?v=-_bcG8WBNR8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply