ಬೆಳ್ಳಂಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ಕಾಡಾನೆ ಮರಳಿ ಕಾಡಿಗೆ

ಹಾಸನ: ಇಂದು ಬೆಳ್ಳಂಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ಕಾಡಾನೆ ಈಗ ಕಾಡಿಗೆ ಮರಳಿದೆ.

ಇಂದು ಮುಂಜಾನೆ ನಗರದ ಪಿಎನ್‍ಟಿ ಕಾಲೋನಿಗೆ ಕಾಡಾನೆ ಬಂದಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಅರಣ್ಯಾಧಿಕಾರಿಗಳ ತಂಡ ಕಾಡಾನೆ ಆನೆ ಬೆನ್ನಟ್ಟಿ ಯಶಸ್ವಿಯಾಗಿ ಕಾಡಿಗೆ ಓಡಿಸಿದ್ದಾರೆ.

ಡಿಸಿಎಫ್ ಸಿವರಾಂಬಾಬು, ಎಸಿಎಫ್ ಹರೀಶ್, ಆರ್‍ಎಫ್‍ಓ ಜಗದೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾಡಾನೆ ಉದ್ದೂರು, ಶಂಖ, ಅತ್ತಿಹಳ್ಳಿ, ಜಿನ್ನೇನಹಳ್ಳಿ, ಇಬ್ದಾಣೆ ಗ್ರಾಮಗಳ ಮೂಲಕ ಕಾಡು ಸೇರಿದೆ.

ಬೆಳಗ್ಗೆಯೇ ನಗರಕ್ಕೆ ಆನೆ ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ಹದಿನೈದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಕಾಡಾನೆ ನಗರಕ್ಕೆ ಎಂಟ್ರಿ ಕೊಟ್ಟಿದೆ.ಕಾಡಾನೆಯನ್ನು ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *