ಕೊಲೆ ಮಾಡಿ ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

ಬೆಂಗಳೂರು: ಪತಿಯನ್ನು ಕೊಲೆ ಮಾಡಿ ಎರಡು ವರ್ಷ ಪೊಲೀಸರಿಗೆ ಯಾಮಾರಿಸಿದ್ದ ಪತ್ನಿ ಹಾಗೂ ಪ್ರಿಯಕರ ಕೊನೆಗೂ ಬೆಂಗಳೂರು ಪೊಲೀಸರ ಬಲೆಗೆ ಸಿಕ್ಕಿದ್ದಾರೆ.

ಪತಿ ಉಮಾಶಂಕರ್ ರಾತ್ರಿ ಕುಡಿದ ಮಲಗಿದ್ದಾಗ ಪತ್ನಿ ಸುಖಿತಾ ಪರಪುರುಷನೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಪತ್ನಿಯನ್ನು ಪರ ಪುರುಷನ ಜೊತೆ ಕಂಡ ಪತಿ ಉಮಾಶಂಕರ್ ಅಡ್ಡಿಪಡಿಸಲು ಹೋಗಿದ್ದಕ್ಕೆ ಪ್ರಿಯಕರ ಶ್ರೀನಿವಾಸ್ ಜೊತೆ ಸೇರಿ ಒಂದೇ ಒಂದು ಸಣ್ಣ ಕುರುಹು ಸಿಗದ ರೀತಿಯಲ್ಲಿ ಕೊಲೆ ಮಾಡಿದ್ದಳು.

ಬೆಳಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಳು. ಕೇಸ್ ದಾಖಲಿಸಿಕೊಂಡು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಪೊಲೀಸರು ಕೂಡ ಆತ್ಮಹತ್ಯೆ ಎಂದು ಮರಳಿ ಬಂದಿದ್ದರು. ಸುಖೀತ ಅಷ್ಟು ನಾಜುಕಾಗಿ ತನ್ನ ಪತಿಯನ್ನು ಕೊಲೆ ಮಾಡಿದ್ದಳು.

ಕಳ್ಳರ ಮನಸು ಹುಳ್ಳ್ ಹುಳ್ಗೆ ಎಂಬ ನಾಡ್ನುಡಿ ಎಂತೆ ಹೆಂಡತಿಯ ಮುಖದಲ್ಲಿ ಇದ್ದ ಹತಾಷೆ ಪೊಲೀಸರಿಗೆ ಎಲ್ಲೊ ಒಂದು ಕಡೆ ಅನುಮಾನ ಮೂಡಿಸಿತ್ತು. ಆದರೆ ಪೊಲೀಸರಿಗೆ ಅವರನ್ನು ವಿಚಾರಣೆಗೊಳಪಡಿಸುವ ಯಾವ ಕಾರಣಗಳು ಸಿಕ್ಕಿರಲಿಲ್ಲ. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಅನುಮಾನಕ್ಕೆ ಪುಷ್ಠಿ ಸಿಕ್ಕಿತ್ತು. ಎರಡು ವರ್ಷದ ಬಳಿಕ ಪತ್ನಿ ಸುಖೀತಳನ್ನು ವಿಚಾರಣೆಗೊಳಪಡಿಸಿದಾಗ ನಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿ ಬರುತ್ತಿದ್ದರಿಂದ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಶ್ರೀನಿವಾಸ್ ಹಾಗೂ ಉಮಾಶಂಕರ್ ಪತ್ನಿಯನ್ನು ಬಂಧಿಸಿರುವ ಸೋಲದೇವನಹಳ್ಳಿ ಜೈಲಿಗಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *