ಕಾಂಗ್ರೆಸ್‍ಗೆ ಯಾಕ್ರೋ ವೋಟ್ ಹಾಕಿಲ್ಲ- ವೀರಶೈವ ಲಿಂಗಾಯತರಿಗೆ ನಿಂದನೆ

ದಾವಣಗೆರೆ: ರಾಜ್ಯದಲ್ಲಿ ಎರಡೂ ಹಂತದ ಚುನಾವಣೆ ಮುಗಿದಿದೆ. ಈ ಬೆನ್ನಲ್ಲೇ ಇದೀಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಮುಖಂಡ  ಕ್ಲಾಸ್ ತೆಗೆದುಕೊಂಡಿದ್ದಾರೆ.

ದಾವಣಗೆರೆ ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ವೈ.ರಾಮಪ್ಪ ಅವರೇ ನಿಂದಿಸಿದ ಕಾಂಗ್ರೆಸ್ ಮುಖಂಡ. ಇವರು ಕಾಂಗ್ರೆಸ್‍ಗೆ ಯಾಕೆ ವೋಟ್ ಹಾಕಿಲ್ಲ ಎಂದು ವೀರಶೈವ ಲಿಂಗಾಯತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಯಾಕೆ ಕೆಲಸ ಮಾಡಲಿಲ್ಲ ಎಂದು ವೀರಶೈವ ಲಿಂಗಾಯತರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದನ್ನು ಅಲ್ಲೇ ಇದ್ದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ರಾಮಪ್ಪ ವಿರುದ್ಧ ವೀರಶೈವ ಲಿಂಗಾಯತರ ಆಕ್ರೋಶ ಹೊರಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *