ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಗಾಳಿ ಹೆಚ್ಚಾಗಿದೆ. ಇಂದು ಸಹ ತಂಪಾದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಅಸಾನಿ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಈ ವಾತಾವರಣ ಸೃಷ್ಟಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-21
ಮಂಗಳೂರು: 31-26
ಶಿವಮೊಗ್ಗ: 33-23
ಬೆಳಗಾವಿ: 35-23
ಮೈಸೂರು: 27-21
ಮಂಡ್ಯ: 28-22

ಕೊಡಗು: 24-19
ರಾಮನಗರ: 28-22
ಹಾಸನ: 28-21
ಚಾಮರಾಜನಗರ: 27-21
ಚಿಕ್ಕಬಳ್ಳಾಪುರ: 28-20
ಕೋಲಾರ: 29-22

ತುಮಕೂರು: 30-22
ಉಡುಪಿ: 32-26
ಕಾರವಾರ: 32-28
ಚಿಕ್ಕಮಗಳೂರು: 28-20
ದಾವಣಗೆರೆ: 34-23

ಚಿತ್ರದುರ್ಗ: 33-22
ಹಾವೇರಿ: 35-23
ಬಳ್ಳಾರಿ: 37-25
ಗದಗ: 37-24
ಕೊಪ್ಪಳ: 37-24
ರಾಯಚೂರು: 49-27

ಯಾದಗಿರಿ: 41-27
ವಿಜಯಪುರ: 39-26
ಬೀದರ್: 39-27
ಕಲಬುರಗಿ: 41-28
ಬಾಗಲಕೋಟೆ: 40-25

Leave a Reply