ನಾವು ಗಾಳಕ್ಕೆ ಬೀಳುವ ಮೀನಲ್ಲ- ಬಿಜೆಪಿಯವರಿಗೆ ಸಂಸದ ಡಿಕೆ ಸುರೇಶ್ ಟಾಂಗ್

ತುಮಕೂರು: ಯಾರೇ ಗಾಳ ಹಾಕಿದ್ರೂ ನಾವು ಗಾಳಕ್ಕೆ ಬೀಳುವ ಮೀನಲ್ಲ. ಗಾಳ ಬಿಟ್ಟು ಬಲೆ ಬೀಸಿದ್ರೂ ಅದನ್ನು ಬೇಧಿಸಿ ಹೊರಬರುವ ಜಾಯಮಾನ ನಮ್ಮದು ಎಂದು ಸಂಸದ ಡಿಕೆ ಸುರೇಶ್ ಪರೋಕ್ಷವಾಗಿ ಬಿಜೆಪಿಯವರಿಗೆ ಟಾಂಗ್ ನೀಡಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಮಾತನಾಡಿದ ಅವರು, ಐಟಿ ದಾಳಿಗೆ ಹೆದರುವ ಪ್ರಮೇಯ ನಮಗೇನೂ ಇಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಬೇಕು. ಮುಂಬುರುವ ಚುನಾವಣೆಯಲ್ಲಿ ಅವರ ಹೋರಾಟದ ಭರಾಟೆ ಕಡಿಮೆ ಮಾಡ್ಬೇಕು ಅಂತ ಪ್ರಯತ್ನಿಸುತಿದ್ದಾರೆ. ಆದ್ರೆ ಅದಕ್ಕೆಲ್ಲ ಹೆದರುವವರು ನಾವಲ್ಲ ಎಂದು ಹೇಳಿದ್ರು.

ಕೆಲವು ಜಾತಿ ಮೀನುಗಳು ಗಾಳಕ್ಕೆ ಸಿಗುತ್ತವೆ, ಕೆಲವು ಸಿಗಲ್ಲ. ನಾವು ಗಾಳಕ್ಕೆ ಸಿಲುಕದವರು. ಯಾರು ನಮಗೆ ಗಾಳ ಹಾಕಲು ಪ್ರಯತ್ನಿಸಿದ್ರು ಅನ್ನೊದನ್ನು ಡಿಕೆಶಿ ಅವರೇ ಮುಂದಿನ ದಿನದಲ್ಲಿ ತಿಳಿಸ್ತಾರೆ ಎಂದು ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ರು.

Comments

Leave a Reply

Your email address will not be published. Required fields are marked *

More posts