ಕಟೌಟ್ ಕುಸಿದು ನಟ ಅಜಿತ್ ಅಭಿಮಾನಿಗಳಿಗೆ ಗಾಯ

ಚೆನ್ನೈ: ಹಾಲಿನ ಅಭಿಷೇಕ ಮಾಡುವ ವೇಳೆ ಖ್ಯಾತ ತಮಿಳು ನಟ ಅಜಿತ್ ಕಟೌಟ್ ಕುಸಿದು ಐವರು ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಅಜಿತ್ ನಟನೆಯ ‘ವಿಶ್ವಾಸಂ’ ಚಿತ್ರದ ರಿಲೀಸ್ ದಿನ ಅಭಿಮಾನಿಗಳು  ವಿಲ್ಲುಪುರಂ ಥಿಯೇಟರ್ ನಲ್ಲಿ ಕಟೌಟ್‍ಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡುತ್ತಿದ್ದರು. ಈ ವೇಳೆ ಅಭಿಮಾನಿಗಳು 30 ಅಡಿ ಎತ್ತರದ ಕಟೌಟ್ ಮೇಲೇರುತ್ತಿದ್ದಂತೆ ಭಾರ ತಡೆಯಲಾಗದೇ ಕಟೌಟ್ ನೆಲಕ್ಕುರುಳಿದೆ.

ನಿಂತಿದ್ದ ಜನರ ಮೇಲೆ ಕಟೌಟ್ ಬಿದ್ದಿದ್ದು, ಐವರಿಗೆ ಗಾಯಗಾಳಾಗಿದೆ. ಘಟನೆಯಲ್ಲಿ ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈಗ ಅವರ ಆರೋಗ್ಯದ ಸ್ಥಿತಿ ಹೇಗೆ ಇದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ಅಜಿತ್ ಕಟೌಟ್ ನೆಲಕ್ಕುರುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಅಜಿತ್ ಅಭಿಮಾನಿಗಳು ವಿಶ್ವಾಸಂ ಚಿತ್ರಕ್ಕಾಗಿ ಚಿತ್ರಮಂದಿರದ ಬೀಗವನ್ನು ಮುರಿದು ಟಿಕೆಟ್ ಪಡೆಯಲು ಮುಂದಾಗಿದ್ದರು.

ವಿಶ್ವಾಸಂ ಚಿತ್ರವನ್ನು ಶಿರುತೈ ಸಿವಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜಿತ್, ನಯನತಾರಾ, ಬೇಬಿ ಅನಿಕಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *