ಪಕ್ಷ ಅಧಿಕಾರಕ್ಕೆ ಬಂದ್ರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ : ಅಖಿಲೇಶ್ ಯಾದವ್

Akhilesh Yadav

– ಸೂಕ್ತ ಸರ್ಕಾರ ಬೇಕು, ಯೋಗಿ ಸರ್ಕಾರವಲ್ಲ

ಲಕ್ನೋ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ಮತದಾರರ ಮನಗೆಲ್ಲಲು ಸಮಾಜವಾದಿ ಪಕ್ಷ ದೊಡ್ಡ ಆಶ್ವಾಸನೆಯನ್ನು ನೀಡಿದೆ. ಅಧಿಕಾರಕ್ಕೆ ಬಂದರೆ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ

ರೈತ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಕೃಷಿ ಕಾಯಿದೆ ಜಾರಿಗೆ ತಂದಾಗ ಬಿಜೆಪಿ ನಿಲುವು ಏನಿತ್ತು ಮತ್ತು ಕಾನೂನು ಹಿಂಪಡೆದಾಗ ಅದು ರೈತರ ಪರವಾಗಿ ಹೇಗೆ ಆಯಿತು ಎನ್ನುವುದು ಕೇಂದ್ರ ಸರ್ಕಾರ ಹೆಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO

MONEY

ಪ್ರತಿಭಟನೆ ವೇಳೆ ಮೃತ ರೈತ ಕುಟುಂಬಕ್ಕೆ ಯಾರು ಸಹಾಯ ಮಾಡಿದರು? ಹೀಗಾಗಿ ಸಮಾಜವಾದಿ ಪಕ್ಷ ನಿರ್ಧಾರ ಮಾಡಿದೆ ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ರೈತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲು. ಜನರಿಗೆ ಸೂಕ್ತ ಸರ್ಕಾರ ಬೇಕು, ಯೋಗಿ ಸರ್ಕಾರವಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *