ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕ್ಬೇಡಿ: ಎಸ್.ಆರ್ ಶ್ರೀನಿವಾಸ್

ತುಮಕೂರು: ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕಬೇಡಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ಸಚಿವ ಎಸ್.ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನ ತುರುವೆಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಬಸವರಾಜ್ ಸುಳ್ಳಿನ ಕ್ಲಾಸ್ ತೆಗೆದುಕೊಂಡಿರುವ ವಿದ್ಯಾರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಿ ಭಾಷಣದಲ್ಲಿಯೂ ನೀರು ಕೊಟ್ಟಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವರ್ಷ ನಮಗೆ 24 ಟಿಎಂಸಿ ನೀರು ಬಂದಿದೆ. ಇಂತಹ ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕಬೇಡಿ. ಮಾಧ್ಯಮಗಳ ಮುಂದೆ ಹೋಗಿ ನೀರು ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಸಂಸದ ಆಗಿದ್ದವನು ಇದೇ ಕಳ್ಳ ಬಸವರಾಜು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ತನ್ನ ಅಧಿಕಾರವಧಿಯಲ್ಲಿ ಎಳನೀರು ಕಂಪನಿ ಆರಂಭಿಸಿ, ನಿಮ್ಮ ಮಕ್ಕಳಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿ 70ರಿಂದ 80 ಎಕರೆ ಜಮೀನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಗಂಭೀರವಾಗಿ ಆರೋಪಿಸಿದರು.

ಕಂಪನಿಯ ಶೇರು ಖರೀದಿಸಿ ಸದಸ್ಯರಾಗಿ ಎಂದು ಹೇಳಿ ಎಲ್ಲರಿಗೂ ಮಕ್ಮಲ್ ಟೋಪಿ ಹಾಕಿದರು. ಒಂದು ಶೇರ್ 22 ಸಾವಿರ ರೂ. ಬೆಲೆ ಎಂದು ನಿಗದಿ ಮಾಡಿದ್ದರು. ಅಂದು ನಮ್ಮ ತಂದೆಯೂ ನಾಲ್ಕು ಶೇರ್ ಖರೀದಿಸಿ ಮೋಸಕ್ಕೆ ಒಳಗಾದರು. ಆ ಹಣವನ್ನು ಕಂಪನಿಗೆ ನೀಡದೆ ಎಂಜಿನಿಯರಿಂಗ್ ಕಾಲೇಜು ಕಟ್ಟಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *