ವೀರ ಮರಣ ಅಪ್ಪಿದ ಯೋಧರ ಮಕ್ಕಳ ಶಿಕ್ಷಣ ಜವಾಬ್ದಾರಿ ವಹಿಸಿಕೊಂಡ ಸೆಹ್ವಾಗ್

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿಯಲ್ಲಿ ಹುತಾತ್ಮರಾದ 40 ಸೈನಿಕರ ಮಕ್ಕಳ ಶಿಕ್ಷಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಹುತಾತ್ಮ ಯೋಧರಿಗೆ ನಾವು ಎಷ್ಟು ನೀಡಿದರೂ ಕೂಡ ಕಡಿಮೆಯೇ. ನನ್ನಿಂದ ಸಣ್ಣ ಸಹಾಯವಾಗಲಿ ಎಂದು ವೀರ ಮರಣ ಹೊಂದಿದ ಎಲ್ಲಾ ಯೋಧರ ಮಕ್ಕಳ ಶಿಕ್ಷಣ ಹಾಗೂ ಅಗತ್ಯ ಸಹಾಯ ಮಾಡುವುದಾಗಿ ಸೆಹ್ವಾಗ್ ತಿಳಿಸಿದ್ದಾರೆ.

ಇದೇ ವೇಳೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಕ್ಸರ್ ವಿಜಯೇಂದ್ರ ಸಿಂಗ್ ಕೂಡ ತಮ್ಮ ಒಂದು ತಿಂಗಳ ಸಂಬಳವನ್ನು ಯೋಧರ ನಿಧಿಗೆ ನೀಡುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ದಾಳಿಯ ಬಗ್ಗೆ ಹೇಡಿಗಳ ಹಿನಾಕೃತ್ಯ ಎಂದು ಕಿಡಿಕಾರಿದ್ದ ಸೆಹ್ವಾಗ್, ಯೋಧರ ಕುಟುಂಬ ನೋವನ್ನು ಹೇಳಲು ಪದಗಳು ಇಲ್ಲ. ಘಟನೆಯಲ್ಲಿ ಗಾಯಗೊಂಡ ಯೋಧರ ಚೇತರಿಕೆಗೆ ಪ್ರಾರ್ಥಿಸುವುದಾಗಿ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *