ಕೊಹ್ಲಿ ಓರ್ವ ಶ್ರೇಷ್ಠ ನಾಯಕ, ಅದಕ್ಕಿಂತಲೂ ಹೆಚ್ಚಾಗಿ ಸ್ನೇಹಜೀವಿ: ಎಬಿಡಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‍ಶಿಪ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಫಲತೆ ಕಾಣುತ್ತಿದ್ದು, ಅಭಿಮಾನಿಗಳು ಟೀಕೆಗೆ ಗುರಿಯಾಗಿದೆ. ಅಲ್ಲದೇ, ವಿರಾಟ್ ಕೊಹ್ಲಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಡ ಹೆಚ್ಚುತ್ತಿದೆ.

ಆದರೆ, ಇತ್ತ ಕೊಹ್ಲಿಗೆ ದಕ್ಷಿಣ ಆಫ್ರಿಕಾದ ಖ್ಯಾತ ಬ್ಯಾಟ್ಸ್‍ಮನ್ ಎಬಿಡಿ ವಿಲಿಯರ್ಸ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಓರ್ವ ಶ್ರೇಷ್ಠ ನಾಯಕ. ಅದಕ್ಕಿಂತ ಹೆಚ್ಚಾಗಿ ಅವರು ಉತ್ತಮ ಸ್ನೇಹ ಜೀವಿಯಾಗಿದ್ದಾರೆ. ಕಠಿಣ ಸಮಯದಲ್ಲಿಯೂ ತಂಡವನ್ನು ಮುನ್ನಡೆಸುವ ಕೊಹ್ಲಿ ಅವರು ಇತರರಿಗೆ ಪ್ರೇರಣೆಯಾಗಿದೆ ಎಂದು ಹಾಡಿ ಹೊಗಳಿದ್ದಾರೆ.

ನಾನು ಕೊಹ್ಲಿ ಜತೆಗೆ ಆಡುವುದನ್ನು ಸದಾ ಇಷ್ಟಪಡುತ್ತೇನೆ. ಪಂದ್ಯದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲಿದೆ ಎಂದ ಅವರು, ನನ್ನ ಆಟದ ಬಗ್ಗೆ ನನಗೆ ಸಂತೋಷವಿದೆ. ಹೈದ್ರಾಬಾದ್ ವಿರುದ್ಧದ ಕಳೆದ ಪಂದ್ಯದಲ್ಲಿ ನಾನು ರಶೀದ್ ಖಾನ್ ಎಸೆದ ಬಾಲ್‍ಗೆ ಕ್ಲೀನ್ ಬೌಲ್ಡ್ ಆದೆ. ಖಾನ್ ಒಬ್ಬ ಉತ್ತಮ ಬೌಲರ್, ಅವರ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *