ವಿನಯ್ ನನ್ನ ಪಿಎ ಅಲ್ಲ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಮಾಧ್ಯಮಗಳಲ್ಲಿ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಎಂದು ಬೇರೆ ಬೇರೆ ಸುದ್ದಿಗಳು ಬರುತ್ತಿವೆ. ಹಾಗಾಗಿ ವಿನಯ್ ನನ್ನ ಪಿಎ ಅಲ್ಲ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ  ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಬೆಂಗಳೂರು ಸಿವಿಲ್ ನ್ಯಾಯಾಲಯ ಈಶ್ವರಪ್ಪ ಪಿಎ ವಿನಯ್ ಎಂದು ಪ್ರಸಾರ ಮಾಡದಂತೆ ಆದೇಶ ನೀಡಿದೆ. ದಯಮಾಡಿ ವಿನಯ್ ನನ್ನ ಪಿಎ ಎಂದು ಪ್ರಸಾರ ಮಾಡಬೇಡಿ ಎಂದು ಮಾಧ್ಯಮಗಳಿಗೆ ವಿನಂತಿ ಮಾಡಿಕೊಂಡರು.

ತನ್ನ ಟರ್ಮ್ ಮುಗಿತು ಅನ್ನಿಸಿದೆ. ಆದ್ದರಿಂದ ಬೀದಿಯಲ್ಲಿ ಹೋಗೋ ದಾಸನಂತೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಕಳ್ಳರ ಪಕ್ಷ. ಇದನ್ನು ಮಧುಗಿರಿ ಶಾಸಕ ರಾಜಣ್ಣ ಅವರೇ ಹೇಳಿದ್ದಾರೆ. ಈಗ ಈ ಕಳ್ಳರು ಮನೆಮನೆಗೆ ಹೋಗುತ್ತಿದ್ದಾರೆ. ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು.

ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದೇನೆ. ಇಲ್ಲೇ ರಾಜಕೀಯ ಮಾಡಿದ್ದೇನೆ. ಇಲ್ಲಿಂದಲೇ ನಾನು ಶಾಸಕ ಆಗಿದ್ದೇನೆ. ಸ್ಪರ್ಧೆ ಮಾಡುವುದಿದ್ದರೆ ಶಿವಮೊಗ್ಗದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *