ಕಿಚ್ಚನ ಕಿಚಾಯಿಸಿ ಉಲ್ಟಾ ಹೊಡೆದ ವಿನಯ್ ಗುರೂಜಿ

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ನಿಜ ಹುಲಿ ಬಂದರೆ ಓಡಿ ಹೋಗ್ತಾರೆ ಎಂದಿದ್ದ ವಿನಯ್ ಗುರೂಜಿ ಈಗ ಉಲ್ಟಾ ಹೊಡೆದಿದ್ದಾರೆ.

ಹೌದು, ಸುದೀಪ್ ಅವರನ್ನು ಕಿಚಾಯಿಸಿದ್ದ ವಿನಯ್ ಗುರೂಜಿ ಈಗ ಸುದೀಪ್ ಮಾಣಿಕ್ಯ, ಹೆಬ್ಬುಲಿ ಅಂತ ಹೊಗಳಿದ್ದಾರೆ. ಶಿವಮೊಗ್ಗದ ಪುಟ್ಟ ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಾಗ ಸುದೀಪ್ ಎಷ್ಟು ಕಷ್ಟ ಅನುಭವಿಸಿ ಬಂದಿರಬೇಕು. ಸುದೀಪ್ ಗುಣಕ್ಕೆ, ಸಾಧನೆಗೆ ಸಾಷ್ಟಾಂಗ ನಮಸ್ಕಾರ ಎಂದಿದ್ದಾರೆ.

ಗಾಂಧಿನಗರದಲ್ಲಿ ಮುಂದೆ ಬರೋದು ಅಷ್ಟು ಸುಲಭದ ಮಾತಲ್ಲ. ನಾವು ಅದನ್ನು ಗೌರವಿಸುತ್ತೇವೆ. ಕೋಮುಗಲಭೆ ಸೃಷ್ಟಿಸೋಕೆ ಕೆಲವು ಗುಂಪುಗಳು ಪ್ರಯತ್ನ ಮಾಡುತ್ತಲೇ ಇರುತ್ತವೆ. ನನ್ನ ಭಾಷಣಗಳನ್ನ ಇಟ್ಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಗುರೂಜಿ ಹೇಳಿದ್ದೇನು..?
ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾರೆ ಎಂದು ಗುರೂಜಿ ಅಪಹಾಸ್ಯ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.

ಇದಕ್ಕೆ ಮೈಸೂರಿನ ವಾಲ್ಮೀಕಿ ಸಮುದಾಯದ ಅರ್ಜುನ್ ಗುರೂಜಿ ಟಾಂಗ್ ಕೊಟ್ಟಿದ್ದು, ಕಲಾವಿದನನ್ನು ಪ್ರತಿಯೊಬ್ಬರು ಗೌರವಿಸೋದನ್ನು ಕಲಿಯಬೇಕು. ಸುದೀಪ್ ಎಂದರೆ ವಾಲ್ಮೀಕಿ ಸಮುದಾಯದ ಹೆಮ್ಮೆ. ಡಾ. ರಾಜ್‍ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಎಲ್ಲರೂ ಚಲನಚಿತ್ರದ ಮೂಲಕ ಭಾಷೆಯನ್ನು ಬೆಳೆಸಿದವರು. ಚಲನಚಿತ್ರ ಅನ್ನೋದೇ ಭಾಷೆಯ ಕಲೆಯನ್ನು ತೋರಿಸುವಂತದ್ದು. ಹೀಗಾಗಿ ಕಲಾವಿದನನ್ನು ಗೌರವಿಸಬೇಕು ಎಂದು ವಿನಯ್ ಗುರೂಜಿ ವಿರುದ್ಧ ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *