ರಕ್ಷಣೆಗಾಗಿ ಕಾಡಿಂದ ನಾಡಿಗೆ ಬಂದ ನವಿಲಿಗೆ ಗ್ರಾಮಸ್ಥರ ನೆರವು

ಬೀದರ್: ಕಾಲಿಗೆ ಪೆಟ್ಟಾಗಿದ್ದ ನವಿಲೊಂದು ರಕ್ಷಣೆಗಾಗಿ ಕಾಡಿನಿಂಡ ನಾಡಿಗೆ ಬಂದು ಆಂಜಿನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿದ್ದ ನವಿಲಿಗೆ ಗ್ರಾಮಸ್ಥರು ನೆರವಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮಂಗಲಿಗಿ ಗ್ರಾಮದಲ್ಲಿ ನಡೆದಿದೆ.

ಕಾಲಿಗೆ ಪೆಟ್ಟಾಗಿದ್ದು ದಿಕ್ಕು ದೋಚದೇ ನವಿಲೊಂದು ಪರದಾಡುತ್ತಿತ್ತು, ಬಳಿಕ ಕಾಡಿನಿಂದ ಹೊರಬಂದು ಮಂಗಲಿಗಿ ಗ್ರಾಮದ ಆಂಜನೇಯನ ದೇವಸ್ಥಾನದ ಬಳಿ ಆಶ್ರಯ ಪಡೆದಿತ್ತು. ಆದರೆ ಕಾಲಿಗಾದ ಪೆಟ್ಟಿನಿಂದ ನವಿಲು ಒದ್ದಾಡುತ್ತಿತ್ತು. ಈ ವೇಳೆ ನವಿಲಿನ ಕಾಲಿಗೆ ಪೆಟ್ಟಾಗಿದ್ದನ್ನ ಗಮನಿಸಿದ ಗ್ರಾಮಸ್ಥರು ಅದಕ್ಕೆ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿದ್ದಾರೆ.

ಸದ್ಯ ಗ್ರಾಮಸ್ಥರ ನೆರವಿನಿಂದ ನವಿಲು ಕೊಂಚ ಚೇತರಿಸಿಕೊಂಡಿದ್ದು, ಈಗಲೂ ದೇವಸ್ಥಾನದ ಬಳಿಯೇ ತಂಗಿದೆ. ಈಗಿನ ಕಾಲದಲ್ಲಿ ಒಬ್ಬರಿಗೆ ಒಬ್ಬರು ಕಷ್ಟಕಾಲದಲ್ಲಿ ಸಹಾಯ ಮಾಡದ ಜನೆ ಮಧ್ಯೆ ಮಂಗಲಿಗಿ ಗ್ರಾಮಸ್ಥರು ಒಂದು ಪಕ್ಷಿಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *