ಲೆಕ್ಕದಲ್ಲಿ ಎಡವಟ್ಟು ಆರೋಪ – ಗ್ರಾಮ ಲೆಕ್ಕಿಗ ಆತ್ಮಹತ್ಯೆ ಯತ್ನ

ಆನೇಕಲ್: ಲೆಕ್ಕದಲ್ಲಿ ಎಡವಟ್ಟು ಮಾಡಿದ ಆರೋಪಕ್ಕೆ ಪ್ರತಿಯಾಗಿ ಬಿಲ್ ಕಲೆಕ್ಟರ್ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ ಘಟನೆ ಆನೇಕಲ್‍ನಲ್ಲಿ ನಡೆದಿದೆ.

ಚಂದ್ರಶೇಖರ್(ರವಿ) ಕರ ವಸೂಲಿಗಾರರಾಗಿದ್ದು. ಸಿಡಿಹೊಸಕೋಟೆಯ ನಿವಾಸಿಯಾಗಿದ್ದಾರೆ. ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ:  ಮೈಸೂರಿನಲ್ಲಿ ಗ್ಯಾಂಗ್‍ರೇಪ್ ಪ್ರಕರಣ – ಘಟನೆಯನ್ನು ಬಿಚ್ಚಿಟ್ಟ ಸಂತ್ರಸ್ತೆಯ ಸ್ನೇಹಿತ

ಹಿಂದೆ ಇದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕರ ವಸೂಲಿಗಾರನ ವಿರುದ್ಧ ಟ್ಯಾಕ್ಸ್ ವಸೂಲಿಯಲ್ಲಿ ಅಕ್ರಮದ ಆರೋಪ ಹೊರಿಸಿ ನೋಟೀಸ್ ನೀಡಿದ್ದರು. ಇದರಿಂದ ಮನ ನೊಂದ ಚಂದ್ರಶೇಖರ್ ಸಭೆಯಲ್ಲಿಯೇ ಮಾತಿಗೆ ಮಾತು ಬೆಳೆದು ವಿಷ ಸೇವಿಸಿದ್ದರು. ತಕ್ಷಣವೇ ಜೊತೆಗಿದ್ದ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ನೀಡಲಾಗಿದ್ದು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *