ಐಎಂಎ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು – ಸಂಸದ ರಮೇಶ್ ಜಿಗಜಿಣಗಿ

-ಗ್ರಾಮ ವಾಸ್ತವ್ಯ ಅನ್ನೋದು ನಾಟಕ

ವಿಜಯಪುರ: ಜನರಿಂದ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಚನೆ ಮಾಡಿರುವ ಐಎಂಎ ಕಂಪನಿಯ ಪ್ರಕರಣದಲ್ಲಿ ತನಿಖೆಯ ನಂತರ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಈ ರೀತಿಯ ವಂಚನೆ ಮಾಡಿರುವುದರಿಂದ ಇದೊಂದು ಹೇಯ ಕೃತ್ಯ. ಬಡ್ಡಿ ಹಣದ ಆಸೆಗೆ ಜನರು ಮರುಳಾಗಬಾರದು. ಈ ರೀತಿಯ ವ್ಯವಹಾರ ಮಾಡುವವರ ವಿರುದ್ಧ ಸರ್ಕಾರ ನಿಗಾವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಶುಕ್ರವಾರ ನಡೆಯಲಿರುವ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿ, ದೋಸ್ತಿ ಸರ್ಕಾರಕ್ಕೆ ಜನರ ಹಾಗೂ ಗೋವುಗಳ ಪಾಪ ತಟ್ಟಿದೆ. ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಮೈತ್ರಿ ಸರ್ಕಾರದ ಕಡೆ ಒಂದು ರೂಪಾಯಿ ಕೂಡಾ ಇಲ್ಲ ಎಂದು ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಿಎಂ ಗ್ರಾಮ ವಾಸ್ತವ್ಯ ಅನ್ನೋದು ನಾಟಕ. ಈ ಹಿಂದೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ ಯಾವ ಊರು ಅಭಿವೃದ್ಧಿ ಆಗಿಲ್ಲ. ಜನರು ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ. ಅದಕ್ಕಾಗಿ ಅಭಿವೃದ್ಧಿ ಕಡೆಗೆ ಗಮನಹರಿಸಬೇಕು ಎಂದು ಸಿಎಂ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *