ಭಾರತ ಮಾತಾ ಕೀ ಜೈ ಅನ್ಬೇಕು ಇಲ್ಲ, ನೆಹರು ಕಟ್ಟಿದ ಪಾಕ್‍ಗೆ ಹೋಗ್ಬೇಕು: ಯತ್ನಾಳ್

– ಇನ್ನೇನಿದ್ದರೂ ಒಂದೇ ಮದ್ವೆ, ಎರಡೇ ಮಕ್ಕಳು

ವಿಜಯಪುರ: ಭಾರತ ಮಾತಾ ಕೀ ಜೈ ಅನ್ನಬೇಕು ಇಲ್ಲ ನೆಹರು ಕಟ್ಟಿದ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ.

ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಯತ್ನಾಳ ನೇತೃತ್ವದಲ್ಲಿ ವಿಜಯಪುರದ ಸಿದ್ದೇಶ್ವರ ದೇವಸ್ಥಾನದ ಎದುರು ಸಂಭ್ರಮಾಚರಣೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಶಾಸಕ ಯತ್ನಾಳ್, ಹಮ್ ಪಾಂಚ್ ಹಮ್ ಪಚ್ಚಿಸ್ ಚಲಾಗಯ್. ಇನ್ನೇನು ಇದ್ದರೂ ಒಂದೇ ಮದುವೆ ಎರಡೇ ಮಕ್ಕಳು ಅಷ್ಟೇ ಎಂದರು.

ಅಲ್ಲದೆ ಭಾರತ ದೇಶದಲ್ಲಿ ಇರಬೇಕು ಅಂದರೆ ಭಾರತ್ ಮಾತಾ ಕೀ ಜೈ ಹಾಗೂ ವಂದೇ ಮಾತರಂ ಅನ್ನಬೇಕು. ಇಲ್ಲದೇ ಇದ್ದರೆ ನೀವು ನೆಹರು ಮಾಡಿಕೊಟ್ಟಿರುವ ಪಾಕಿಸ್ತಾನಕ್ಕೆ ಹೋಗಬೇಕು ಮಕ್ಕಳ್ರೇ ಎಂದು ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.

ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಇದು ಭಾರತ ಇತಿಹಾಸದಲ್ಲಿ ಕರಾಳ ದಿನ ಎಂದು ಹೇಳಿದ್ದರು. ಇದಕ್ಕೆ ತೀರುಗೇಟು ಕೊಟ್ಟ ಯತ್ನಾಳ್ ಏ ಬದ್ಮಾಶ್.. ನಿನ್ನ ಕುಟುಂಬಕ್ಕೆ ಇದು ಕರಾಳ ದಿನ. ನಮಗೆ ಇದು ಸುವರ್ಣ ಯುಗ ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *