ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡೋ ಅವಶ್ಯಕತೆ ಇರಲಿಲ್ಲ- ಎಂಬಿ ಪಾಟೀಲ್

– ನನ್ನ ಪಿಎ ಫೋನೂ ಕದ್ದಾಲಿಕೆಯಾದ ಗುಮಾನಿಯಿದೆ

ವಿಜಯಪುರ: ಈಗಲೂ ನಾನು ನನ್ನ ನಿಲುವಿಗೆ ಬದ್ಧನಿದ್ದೇನೆ. ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಕೊಡುವಂತಹ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆಯಲ್ಲೇ ಅನೇಕರು ದಕ್ಷ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಎಂ ಎಂ ಕಲಬುರ್ಗಿ ಅವರ ಕೇಸನ್ನ ಸಿಬಿಐಗೆ 5 ವರ್ಷಗಳ ಕಾಲ ಬೇಧಿಸಲು ಅಗಲಿಲ್ಲ. ನಮ್ಮವರು ಗೌರಿ ಲಂಕೇಶ್ ಕೇಸ್ ಬೇಧಿಸಿದರು.ಇಷ್ಟೆಲ್ಲ ನಮ್ಮ ಪೊಲಿಸ್ ಇಲಾಖೆಯಲ್ಲೇ ದಕ್ಷತೆ ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರ ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಆರೋಪ ಏನಿದೆ. ಅದು ಕೂಡ ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: 34 ಜಿಬಿ ಆಡಿಯೋ ರೆಕಾರ್ಡ್, 6 ಸಾವಿರ ಕರೆ ಕದ್ದಾಲಿಕೆ – ಫೋನ್ ಟ್ಯಾಪಿಂಗ್ ಹೇಗೆ ಮಾಡಲಾಗುತ್ತೆ?

ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದ್ದಾರೆ. ಅವರು ಕೆಪೇಬಲ್ ಇದ್ದಾರೆ. ಒಳ್ಳೇಯವರೂ ಆಗಿದ್ದಾರೆ. ಇಂಥವರು ಇದ್ದರೂ ಸಿಬಿಐಗೆ ಕೊಟ್ಟಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಪಿಎ ಫೋನ್ ಕೂಡ ಟ್ಯಾಪ್ ಆಗಿದೆ ಎಂಬ ಗುಮಾನಿ ಇದೆ. ಎಲ್ಲವೂ ತನಿಖೆ ಆಗಲಿ. ಯಾರನ್ನೂ ರಕ್ಷಿಸಲು ಇಲ್ಲಿ ನಾವು ಹೊರಟಿಲ್ಲ. ಐಎಂಎ ಪ್ರಕರಣವನ್ನು ಸಿಬಿಐಗೆ ಕೊಡಲಿ ತಪ್ಪಿಲ್ಲ. ನಮ್ಮವರು ಒಳ್ಳೆಯ ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *