ಬಿಎಸ್‍ವೈ ಕಾಲ್ಗುಣ ಸರಿಯಿಲ್ಲ, ಸಿಎಂ ಆದಾಗೆಲ್ಲಾ ರಾಜ್ಯಕ್ಕೆ ಕಂಟಕ ಬಂದಿದೆ: ವಿಜಯಾನಂದ ಕಾಶಪ್ಪನವರ್

ಬಾಗಲಕೋಟೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅದೃಷ್ಠ, ಕಾಲ್ಗುಣ ಸರಿಯಿಲ್ಲ. ಅವರು ಸಿಎಂ ಆದಾಗೆಲ್ಲಾ ರಾಜ್ಯಕ್ಕೆ ಕಂಟಕ ಎದುರಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಲೇವಡಿ ಮಾಡಿದ್ದಾರೆ.

ಹುನಗುಂದ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹುನಗುಂದ ಹಾಲಿ ಶಾಸಕರು, ಶಾಸಕರೋ ಹೌದು ಅಲ್ವೋ ಎಂಬ ಅನುಮಾನ ಮೂಡಿದೆ. ಬಿಜೆಪಿ ಶಾಸಕರು ಸಂತ್ರಸ್ತರ ಜೊತೆ ಸೌಜನ್ಯದಿಂದ ವರ್ತನೆ ಮಾಡುತ್ತಿಲ್ಲ. ಸಂತ್ರಸ್ತರೊಂದಿಗೆ ದರ್ಪದ ಮಾತುಗಳನ್ನು ಆಡುವುದು ಸರಿಯಲ್ಲ ಎಂದರು.

ಇದೇ ವೇಳೆ ಕೃಷ್ಣಾ, ಮಲಪ್ರಭಾ ನದಿಗಳ ಪ್ರವಾಹದಿಂದ ತೀವ್ರ ಸಂಕಷ್ಟ ಎದುರಿಸಿರುವ ಜಿಲ್ಲೆಯಲ್ಲಿ 21 ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪರಿಹಾರ ವಿತರಣೆಯ ರೂಪರೇಷಯೇ ಸರಿಯಾಗಿಲ್ಲ. ಸರ್ಕಾರ ಹಾನಿಯಾದ ಬೆಳೆಗಳಿಗೆ ಹೆಕ್ಟೇರಿಗೆ ನೀಡುತ್ತಿರುವ 6,800 ರೂ. ನೀರಾವರಿ, ಬೆಳೆಗಳಿಗೆ 13,000 ಸಾವಿರ ರೂ. ಸಾಕಾಗುವುದಿಲ್ಲ. ಆದ್ದರಿಂದ ಪರಿಹಾರ ಹೆಚ್ಚಿಸಬೇಕೆಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *