ಪ್ರಚಾರದ ಕೊನೆಯ ದಿನ ಸಿನಿಮಾ ವೀಕ್ಷಿಸಿದ ಕೈ ಅಭ್ಯರ್ಥಿ ಆನಂದ್ ಸಿಂಗ್

ಬಳ್ಳಾರಿ: ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ತೆಲುಗು ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಆನಂದ್ ಸಿಂಗ್ ತಮ್ಮ ಬಿಡುವಿಲ್ಲದ ಪ್ರಚಾರದ ಮಧ್ಯೆ ಮಹೇಶ್ ಬಾಬು ಅಭಿನಯದ ಭರತ್ ಅನೆ ನೇನು ತೆಲುಗು ಚಿತ್ರವನ್ನು ಹೊಸಪೇಟೆಯ ಚಲನಚಿತ್ರ ಮಂದಿರದಲ್ಲಿ ನೋಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕೆಲ ಮುಖಂಡರು ಆನಂದ್ ಸಿಂಗ್ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಇವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಬ್ದುಲ್ ವಾಹಬ್ ಅವರನ್ನು 30637 ಮತಗಳ ಅಂತರದಿಂದ ಸೋಲಿಸಿದ್ದರು.

ಈ ಬಾರಿ ಬಿಜೆಪಿ ಯಿಂದ ಹೆಚ್ ಆರ್ ಗವಿಯಪ್ಪ ಮತ್ತು ಜೆಡಿಎಸ್ ನಿಂದ ದೀಪಕ್ ಸಿಂಗ್ ಕಣದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *