ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

ಬಳ್ಳಾರಿ: ನೀವೂ ಮಸೀದಿಯ ಕೆಲಸ ಮಾಡಿದ್ರೀ. ಆದ್ರೆ ದೇವಸ್ಥಾನದ ಅಭಿವೃದ್ಧಿಯ ಕೆಲಸ ಯಾಕೆ ಮಾಡಲಿಲ್ಲ ಅಂತಾ ಪ್ರಶ್ನೆ ಮಾಡಿದ ಮತದಾರನೊಬ್ಬನಿಗೆ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಅವಾಜ್ ಹಾಕಿದ ಘಟನೆ ನಡೆದಿದೆ.

ಆನಂದಸಿಂಗ್ ಅವರು ಚಿತ್ತವಾಡಗಿಯ ಒಂದನೇ ವಾರ್ಡ್  ನಲ್ಲಿ ಪ್ರಚಾರ ನಡೆಸುವ ವೇಳೆ ನಾಗರಾಜ ಎನ್ನುವ ಯುವಕ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆನಂದ್  ಅವಾಜ್ ಹಾಕಿದ್ದಾರೆ.

ಚಿತ್ತವಾಡಗಿಯ ಮಸೀದಿಯ ಕೆಲಸ ಮಾಡಿದ್ರಿ, ದೇವಸ್ಥಾನದ ಕೆಲಸ ಯಾಕೆ ಮಾಡಲಿಲ್ಲ ಅಂತಾ ಪ್ರಶ್ನೆ ಮಾಡಿದಾಗ ಆನಂದಸಿಂಗ್, ನಿನಗೆ ಅದನ್ನೆಲ್ಲಾ ಕೇಳುವ ಹಕ್ಕಿಲ್ಲ ಅಂತಾ ಜೋರಾಗಿ ಅವಾಜ್ ಹಾಕಿದ್ದಾರೆ. ಅಲ್ಲದೇ ನಿನ್ನ ಹೆಸರೇನೂ, ವಯಸ್ಸೆಷ್ಟು ಅಂತಾ ಭಯಪಡಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷ ಅಂದ್ರೆ, ಈ ದೃಶ್ಯಾವಳಿಯನ್ನು ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

https://www.youtube.com/watch?v=YJ6LMh3qt2M&feature=youtu.be

Comments

Leave a Reply

Your email address will not be published. Required fields are marked *